ಮೊಬೈಲ್ ಫೋನ್ ಸ್ವಿಚ್ ಆಫ್
ಶುಭಕೋರಲು ಕೊಸರಾಡಿದ ಕಾರ್ಯಕರ್ತರು
ನಿರಂತರ ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ಸಜ್ಜನಿಗೆ, ಸರಳತೆ ಉಳಿಸಿಕೊಂಡ ಮಾದರಿ ನಾಯಕ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹುಟ್ಟುಹಬ್ಬ ದೇಶ ವಿದೇಶದಿಂದ ಶುಭಾಷಯಗಳ ಮಹಾಪೂರ ಬಂದಿದೆ. ರಾಜ್ಯ, ರಾಷ್ಟ್ರ ನಾಯಕರು ಕಿಮ್ಮನೆಗೆ ಫೋನ್ ಮೂಲಕ ಶುಭಾಷಯ ಕೋರಿದರು. ಸಾಮಾಜಿಕ ಜಾಲತಾಣದಲ್ಲೂ ವಿವಿಧ ಬಗೆಯ ಫೋಟೊ ವಿಡೀಯೋ ಮೂಲಕ ವಿಭಿನ್ನವಾಗಿ ಶುಭಾಷಯ ಕಾಣಿಸಿಕೊಂಡವು.
1951ರಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಸಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಮ್ಮನೆಯಲ್ಲಿ ಅವರು ಜನಿಸಿದರು. 71ನೇ ವರ್ಷದ ಹುಟ್ಟುಹಬ್ಬದ ಸಡಗರವನ್ನು ಕಾರ್ಯಕರ್ತರು ಪಕ್ಷದ ಮುಖಂಡರು ಮಂಗಳೂರಿನಲ್ಲಿ ಆಚರಿಸಿದರು. ಬೆಳಗ್ಗಿನಿಂದ ಕಿಮ್ಮನೆ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಕೆಲವು ಕಾರ್ಯಕರ್ತರು ಫೋನ್ ಮೂಲಕ ಶುಭ ಕೋರಲು ಆಗಲಿಲ್ಲ ಎಂದು ನೆಲದ ಧ್ವನಿಯೊಂದಿಗೆ ಬೇಸರ ವ್ಯಕ್ತಪಡಿಸಿದರು. ಹುಟ್ಟುಹಬ್ಬವನ್ನು ಸಡಗರದಿಂದ ಆಚರಿಸುವ ಹುಮ್ಮಸ್ಸು ಹೊಂದಿದ್ದ ಕಾರ್ಯಕರ್ತರಿಗೆ ಕಿಮ್ಮನೆ ಮಾತಿಗೂ ಸಿಗದಿರುವುದು ಬೇಸರಕ್ಕೆ ಕಾರಣವಾಗಿದೆ. ಹೀಗಾಗಿ ಹುಟ್ಟಿದ ದಿನದ ಸಂಭ್ರಮವನ್ನು ಮುಂದಿನ ದಿನದಲ್ಲಿ ತೀರ್ಥಹಳ್ಳಿಯಲ್ಲಿ ಸಡಗರದಿಂದ ಆಚರಣೆ ಮಾಡಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.