ತುಂಗಾ ನದಿಯಲ್ಲಿ ಶವ ಪತ್ತೆ
ಸಂಕಷ್ಟದಲ್ಲಿ ಕೂಲಿ ಕೆಲಸಗಾರ ಅನ್ಸರ್ ಕುಟುಂಬ
ತೀರ್ಥಹಳ್ಳಿ ತಾಲ್ಲೂಕಿನ ಮಾಳೂರು ಸಮೀಪದ ತುಂಗಾ ನದಿಯಲ್ಲಿ ಭಾನುವಾರ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಮಾಳೂರು ಗ್ರಾಮದ ಅನ್ಸರ್ (48) ಎಂದು ಗುರುತಿಸಲಾಗಿದೆ. ಅನ್ಸರ್ ಮೂರು ದಿನದ ಹಿಂದೆ ಕಾಲು ಜಾರಿ ತುಂಗಾ ನದಿಗೆ ಬಿದಿದ್ದರು ಎಂದು ತಿಳಿದುಬಂದಿದೆ.
ಕಡು ಬಡತನದ ಜೀವನ ಸಾಗಿಸುತ್ತಿದ್ದ ಅನ್ಸರ್ ಅವರು ಕುಟುಂಬಕ್ಕೆ ಆಸರೆಯಾಗಿದ್ದರು. ಅವರ ಅಗಲಿಕೆಯಿಂದ ಪತ್ನಿ, ಪುತ್ರ, ಪುತ್ರಿಗೆ ದಿಕ್ಕು ತೋಚದಂತಾಗಿದೆ. ಕೂಲಿ ಕೆಲಸ ಮಾಡಿಕೊಂಡು ಕುಟುಂಬದ ನಿರ್ವಹಣೆ ಆಗಬೇಕಿದ್ದು ಮಕ್ಕಳ ಭವಿಷ್ಯದ ಕತ್ತಲಿಗೆ ಸರಿದಂತಾಗಿದೆ. ಜಿಲ್ಲಾಡಳಿತ ಹಾಗೂ ತೀರ್ಥಹಳ್ಳಿ ತಾಲ್ಲೂಕು ಆಡಳಿತ ಸೂಕ್ತ ಪರಿಹಾರ ಒದಗಿಸಿ ಕುಟುಂಬಕ್ಕೆ ನೆರವಾಗಬೇಕಿದೆ.