ಶಿವಮೊಗ್ಗಕ್ಕೆ ದೌಡು
ಎಸಿ ಮುಂದೆ ಹಾಜರ್, ಅವಿಶ್ವಾಸ ಮಂಡನೆ
ಸಿಡಿದೆದ್ದ ಸದಸ್ಯರಿಗೆ ಸಿಕ್ಕುವುದೇ ಜಯ...?
ಏಕಪಕ್ಷೀಯ ನಿರ್ಧಾರಕ್ಕೆ ಬುಗಿಲೆದ್ದ ಆಕ್ರೋಶ
ಒಂದೂವರೆ ವರ್ಷದ ಹಿಂದೆ ಬೆಜ್ಜವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದ ದಾಕ್ಷಾಯಿಣಿ ಬಾಬಣ್ಣ ಇದೀಗ ಸದಸ್ಯರ ವಿಶ್ವಾಸ ಕಳೆದುಕೊಂಡಿದ್ದಾರೆ.
ಅಧ್ಯಕ್ಷೆ ದಾಕ್ಷಾಯಿಣಿ ವಿರುದ್ದ ಅಸಮಾಧಾನಗೊಂಡ ಸದಸ್ಯರು ಬುಧವಾರ ಶಿವಮೊಗ್ಗ ಉಪ ವಿಭಾಗಾಧಿಕಾರಿ ಅವರನ್ನು ಬೇಟಿ ಆಗಿ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ.
ಅಡಳಿತ ನಿರ್ವಹಣೆಯಲ್ಲಿ ಸದಸ್ಯರ ಅಭಿಪ್ರಾಯ, ಸರ್ಕಾರದ ನಿಯಮಗಳಿಗೆ ಬೆಲೆ ಕೊಡದೆ ಏಕಪಕ್ಷೀಯವಾಗಿ ಸ್ವಹಿತಾಸಕ್ತಿ ತೀರ್ಮಾನ ಕೈಗೊಳ್ಳುವ ದಾಕ್ಷಾಯಿಣಿ ಅವರನ್ನು ಅಧ್ಯಕ್ಷೆ ಹುದ್ದೆಯಿಂದ ಪದಚ್ಯುತಿಗೊಳಿಸಲು ಸದಸ್ಯರು ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ.
ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 14 ಸದಸ್ಯರಿದ್ದು ಅಧ್ಯಕ್ಷೆ ವಿರುದ್ದ ಮಂಡಿಸಿರುವ ಅವಿಶ್ವಾಸ ನಿರ್ಣಯಕ್ಕೆ 12 ಸದಸ್ಯರು ಉಪ ವಿಭಾಗಾಧಿಕಾರಿ ಸಮ್ಮುಖ ಸಹಿ ಹಾಕಿದ್ದಾರೆ.
ಅಧ್ಯಕ್ಷೆ ದಾಕ್ಷಾಯಣಿ ಬಾಬಣ್ಣ ವಿರುದ್ದ ಸಂಪೂರ್ಣ ಅಸಮಾಧಾನ ಪ್ರಕಟಿಸಿದ್ದಾರೆ. ಪಕ್ಷಾತೀತವಾಗಿ ಅಧ್ಯಕ್ಷೆ ವಿರುದ್ದ ಸದಸ್ಯರು ಒಂದಾಗಿರುವುದು ರಾಜಕೀಯವಾಗಿ ಕುತೂಹಲಕಾರಿ ಬೆಳವಣಿಗೆ ಕಾರಣವಾಗಿದೆ.