ವಿನಯ್ ಗುರೂಜಿ ವಿರುದ್ದ ಅವಹೇಳನಕಾರಿ ಪೋಸ್ಟ್
ತಲಬಿ ರಾಘವೇಂದ್ರ, ಭಕ್ತವೃಂದದಿಂದ ದೂರು
ಸಾಮಾಜಿಕ ಜಾಲತಾಣದಲ್ಲಿ ಅವಧೂತ ವಿನಯ್ ಗುರೂಜಿ ವಿರುದ್ದ ದ್ವೇಷ, ಸುಳ್ಳು ಮಾಹಿತಿಯಿಂದ ಕೂಡಿದ ಪೋಸ್ಟ್ಗಳು ಹರಿದಾಡುತ್ತಿವೆ. ಸುರೇಶ್ ಕೋಣೆಮನೆ ಮತ್ತು ಅಪರಿಚಿತ ವ್ಯಕ್ತಿಗಳು ವಿನಾಕಾರಣರ ಭಕ್ತರ ನಂಬಿಕೆಗೆ ಘಾಸಿ ಮಾಡುವ ಸಂದೇಶಗಳನ್ನು ನಿರಂತರ ಹರಿಬಿಡುತ್ತಿದ್ದಾರೆ. ಗೂರೂಜಿ ನೀಡಿದ ಸಂದೇಶ, ಅಶೀರ್ವಾದದಿಂದ ಭಕ್ತರ ಸಮಸ್ಯೆಗೆ ಪರಿಹಾರ ದೊರೆತಿದೆ. ಕಳಂಕ ರಹಿತ ಪ್ರತಿಷ್ಠೆ ಹೊಂದಿರುವ ಅವರು ಆರೋಗ್ಯ, ಪೌಷ್ಠಿಕತೆ, ಶಿಕ್ಷಣ, ನೈರ್ಮಲ್ಯ, ಪರಿಸರದ ಅರಿವು, ಗೋ ಸಂರಕ್ಷಣೆ, ಆಯುರ್ವೇದ ಸಂರಕ್ಷಣೆ ಮುಂತಾದ ಕ್ಷೇತ್ರದಲ್ಲಿ ಅಪಾರ ಕಲ್ಯಾಣ ಕಾರ್ಯಕ್ರಮ ನಡೆಸುತ್ತಿದ್ದಾರೆ. ಗೂರೂಜಿ ಅವರ ಧಾರ್ಮಿಕ ಕೆಲಸ ಸಹಿಸದೆ ಕಿಡಿಗೇಡಿಗಳು ತೇಜೋವಧೆ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸಂದೇಶ ರವಾನಿಸುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಆರೋಪಿಗಳ ವಿರುದ್ದ ಎಫ್ಐಆರ್ ದಾಖಲಿಸಬೇಕು ಎಂದು ತೀರ್ಥಹಳ್ಳಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ತಲಬಿ ರಾಘವೇಂದ್ರ ಮತ್ತು ವಿನಯ್ ಗುರೂಜಿ ಭಕ್ತವೃಂದ ಡಿವೈಎಸ್ಪಿ ಶಾಂತವೀರ್ ಅವರಿಗೆ ದೂರು ನೀಡಿದ್ದಾರೆ.