ಜೀವ ಬೆದರಿಕೆ ಹಾಕಿದರೇ ಜೀವರಾಜ್ ಬೆಂಬಲಿಗರು..?
ಪತ್ರಿಕೆ ಹಂಚುವ ವೇಳೆ ಹಲ್ಲೆ
ಶೃಂಗೇರಿ ತಾಲ್ಲೂಕಿನ ನಮ್ಮೂರ ವಾರ್ತೆ ಪತ್ರಿಕಾ ವರದಿಗಾರ ಶಬರೀಶ್ ಮೇಲೆ ಬಿಯರ್ ಬಾಟಲ್ ಹಾಗೂ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ಪಟ್ಟಣದಲ್ಲಿ ಪತ್ರಿಕೆ ಹಂಚುವ ವೇಳೆ ಜೀವರಾಜ್ ಬೆಂಬಲಿಗರು ಎನ್ನಲಾದ ಸಂಪೆಕೊಳಲು ಸುನಿಲ್ ಹಾಗೂ ಕಾಂಚಿನಗರ ಭರತ್ ಹಲ್ಲೆ ನಡೆಸಿದ್ದು ಶಬರೀಶ್ ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇರ್ವರು ರಸ್ತೆ ಅಡ್ಢಗಟ್ಟಿ ಶಬರೀಶ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. “ಎಸ್ಸಿ
ಸೂ…ಮಗನೆ ನೀನು ಶೃಂಗೇರಿಯಲ್ಲಿ ರಾಜಕೀಯ ಮಾಡ್ತೀಯಾ..! ಹರೀಶ್ ಶೆಟ್ಟಿ, ಜೀವರಾಜ್ ವಿರುದ್ದ ಸಾಮಾಜಿಕ
ಜಾಲತಾಣದಲ್ಲಿ ಬರಿತೀಯಾ..” ಎಂದು ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಲಾಗಿದೆ,
ಆದರೆ ಪೊಲೀಸರು ಹಲ್ಲೆಗೊಳಗಾದ ವ್ಯಕ್ತಿಯ ಮೇಲೆ ದೂರುಗಳನ್ನು ದಾಖಲು ಮಾಡಿದ್ದು ಸರ್ಕಾರದ
ಅಂಗ ಸಂಸ್ಥೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪತ್ರಕರ್ತ, ಗ್ರಾ.ಪಂ. ಸದಸ್ಯ ಶಬರೀಶ್ ಆರೋಪಿಸಿದ್ದಾರೆ.