ಆರಗ ಜ್ಞಾನೇಂದ್ರರಿಂದ ನೊಂದವರಿಗೆ ಸಾಂತ್ವಾನ
ಗೃಹಸಚಿವ ಆರಗ ಜ್ಞಾನೇಂದ್ರ ತೀರ್ಥಹಳ್ಳಿ ಕ್ಷೇತ್ರದ ಮೇಲಿನ ಅಭಿಮಾನದಿಂದ ರಾಜ್ಯದ ಒತ್ತಡದ ಕೆಲಸಗಳ ಮಧ್ಯೆ ತಾಲ್ಲೂಕಿನ ಅನೇಕ ಕಡೆಗಳಿಗೆ ಭೇಟಿ ನೀಡುವುದನ್ನು ಸಾಮಾನ್ಯ ಕಾರ್ಯಕರ್ತನಂತೆ ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ. ಮಂಗಳವಾರ ಶರಾವತಿ ನದಿ ಉಗಮ ಸ್ಥಾನ ಅಂಬುತೀರ್ಥದಲ್ಲಿ ನಡೆಯುತ್ತಿರುವ 5 ಕೋಟಿ ರೂಪಾಯಿಗಳ ಕಾಮಗಾರಿಯನ್ನು ಗೃಹಸಚಿವ ಆರಗ ಜ್ಞಾನೇಂದ್ರ ವೀಕ್ಷಿಸಿದರು.
ಆರಗ ಸಮೀಪದ
ಗಾಗೋಳ್ಳಿ ರಮೇಶ್ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ನೊಣಬೂರು ದಲಿತ ವ್ಯಕ್ತಿಯೊಬ್ಬ ಸೈಕಲ್ನಲ್ಲಿ ಚಲಿಸುವಾಗ ರಸ್ತೆ ಪಕ್ಕದ ಬಾವಿಗೆ ಬಿದ್ದು
ಆಕಸ್ಮಿಕ ಮರಣ ಹೊಂದಿದ್ದರು. ಅವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.
ಮುಳುಬಾಗಿಲು ಪಂಚಾಯತಿ ಭೀಮನಕಟ್ಟೆಯಲ್ಲಿ ವಿದ್ಯುತ್ ತಂತಿ ತಗುಲಿ ಮರಣ ಹೊಂದಿದ ಗೌರಮ್ಮ ಎಂಬುವವರ ಮನೆಗೆ ಭೇಟಿ, ನಂತರ ಅಡಿಕೆ ಮರದಿಂದ ಬಿದ್ದು ಆಕಸ್ಮಿಕ ಅಸುನೀಗಿದ ಮೇಗರವಳ್ಳಿ ಹನಸ ವಾಸಪ್ಪ ಗೌಡರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಿ ಬೆಂಗಳೂರಿಗೆ ತೆರಳಿದ್ದಾರೆ.