ಮಹಿಳೆಯರನ್ನು ಸರ್ಕಾರದಿಂದ ಕಡೆಗಣಿಸಲಾಗುತ್ತಿದೆ. ಭದ್ರತೆಯಿಲ್ಲದೆ ಬಿಸಿಯೂಟ ತಯಾರಿಸುತ್ತಿದ್ದೇವೆ. 60 ವರ್ಷ ದಾಟಿದ ಬಿಸಿಯೂಟ ತಯಾರಕರಿಗೆ ಪಿಂಚಣಿ, ಇಡುಗಂಟು ನೀಡದೆ ವಂಚಿಸಿ ನಿವೃತ್ತಿ ಘೋಷಿಸುತ್ತಿದ್ದಾರೆ. ನ್ಯಾಯಯುತ ಬೇಡಿಕೆ ಈಡೇರದಿದ್ದರೆ ತಾಲ್ಲೂಕಿನಲ್ಲಿ ಬಿಸಿಯೂಟ ಸ್ಥಗಿತ ಚಳುವಳಿ ಹಮ್ಮಿಕೊಳ್ಳುತ್ತೇವೆ ಎಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ತಾಲ್ಲೂಕು ಘಟಕದಿಂದ ಸೋಮವಾರ ತಾಲ್ಲೂಕು ಕಚೇರಿ ಮುಂಭಾಗ ಧರಣಿ ನಡೆಸಿದರು.ಈ ಸಂದರ್ಭದಲ್ಲಿ ಬಿಸಿಯೂಟ ತಯಾರಕ ಸಂಘದ ಜಿಲ್ಲಾಧ್ಯಕ್ಷೆ ಅಕ್ಕಮ್ಮ, ತಾಲ್ಲೂಕು ಅಧ್ಯಕ್ಷೆ ಎಂ.ಶೈಲ, ಪ್ರಧಾನ ಕಾರ್ಯದರ್ಶಿ ಪರಮೇಶ್ವರಿ, ಕಾರ್ಯದರ್ಶಿ ಆಶಾ, ಸಹಕಾರ್ಯದರ್ಶಿ ಕಲಾವತಿ ಮುಂತಾದವರು ಇದ್ದರು.