ಆದರ್ಶ ಹುಂಚದಕಟ್ಟೆ ಮನೆಗೆ ಬಿ.ವಿ. ಶ್ರೀನಿವಾಸ್ ಭೇಟಿ
ಕಾಂಗ್ರೆಸ್ ಸಂಘಟನೆ, ಹೋರಾಟದ ಗಂಭೀರ ಚರ್ಚೆ
ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರ ಆದರ್ಶ ಹುಂಚದಕಟ್ಟೆ ಅವರ ನಿವಾಸಕ್ಕೆ ಭಾನುವಾರ ಬೆಳಿಗ್ಗೆ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ದಿಢೀರ್ ಭೇಟಿ ನೀಡಿದ್ದು, ಯುವ ಕಾಂಗ್ರೆಸ್ ನಲ್ಲಿ ಹೊಸ ಸಂಚಲನ ಮೂಡಿಸಿದೆ.
ದೇಶದಲ್ಲಿ ಅಗ್ನಿಪಥ ಸೈನಿಕ ನೇಮಕಾತಿ, ಪಠ್ಯ ಪರಿಷ್ಕರಣೆ, ದೇಶ್ ಜೋಡೋ, ನೋಟು ಅಮಾನೀಕರಣ, ತಪ್ಪು ಜಿಎಸ್ ಟಿ, ಸಿಎಎ, ನಿರುದ್ಯೋಗ, ಕೃಷಿ ಕಾಯ್ದೆ, ವಿರೋಧಪಕ್ಷ ಮೇಲೆ ಇಡಿ ಬಳಕೆ ವಿಚಾರವಾಗಿ ಚರ್ಚೆ ನಡೆದಿದೆ. ಜೊತೆಗೆ ಅಸ್ಸಾಂನಲ್ಲಿ ಪ್ರವಾಹದಿಂದ ಆಗಿರುವ ಅನಾಹುತ ಮತ್ತು ರಕ್ಷಣಾ ಕಾರ್ಯದ ಬಗ್ಗೆ ಯುವ ಕಾಂಗ್ರೆಸ್ ತೆಗೆದುಕೊಳ್ಳಬಹುದಾದ ಕ್ರಮದ ಚರ್ಚೆ ನಡೆದಿದೆ.