ಚಿಕ್ಕಲ್ಲಳ್ಳಿ ಸತ್ಯನಾರಾಯಣ ಮತ್ತೆ ಬಿಜೆಪಿಗೆ

ಸರ್ಕಾರಿ ಸೇವೆಯಿಂದಾಗಿ ಪಕ್ಷದಿಂದ ದೂರ ಉಳಿದಿದ್ರು ಮೇಸ್ಟ್ರು
ಬಿಜೆಪಿ ಸಂಘಟನೆಗೆ ಬಲವರ್ಧನೆ

ಶನಿವಾರ ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನಡೆದ ಬಿಜೆಪಿ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ, ಬಸವಾನಿ ಪಿಯುಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ನಿವೃತ್ತರಾದ ಚಿಕ್ಕಲ್ಲಳ್ಳಿ ಸತ್ಯನಾರಾಯಣ ಮತ್ತೆ ಬಿಜೆಪಿ ಸಂಘಟನೆಗೆ ಜಿಗಿದ್ದಿದ್ದಾರೆ.

ಪಟ್ಟಣ ಪಂಚಾಯಿತಿ ಸದಸ್ಯ ಸಂದೇಶ ಜವಳಿ ಪಕ್ಕದಲ್ಲಿ ನಿಂತಿರುವ ಸತ್ಯನಾರಾಯಣ ಅವರ ಪರಿಚಯ ಬಹುತೇಕ ಕಾರ್ಯಕರ್ತರಿಗೆ ಇಲ್ಲ. "ಚಿಕ್ಕಲ್ಲಳ್ಳಿ ಸತ್ಯನಾರಾಯಣ" ಬಿಜೆಪಿಯಿಂದ ಹಾದಿಗಲ್ಲು ತಾ.ಪಂ. ಕ್ಷೇತ್ರದಿಂದ ಸದಸ್ಯರಾಗಿ ಸುಮಾರು ಇಪ್ಪತ್ತು ವರ್ಷದ ಹಿಂದೆ ಆಯ್ಕೆ ಆಗಿದ್ದರು. ಸದಸ್ಯರಾಗಿ ಇರುವಾಗಲೇ ವಿದ್ಯಾರ್ಹತೆ ಆಧಾರದಲ್ಲಿ ಬಸವಾನಿ ಪಿಯುಸಿ ಕಾಲೇಜಿನ ಉಪನ್ಯಾಸಕರಾಗಿ ಸರ್ಕಾರಿ ಸೇವೆಗೆ ಸೇರಿದರು.18 ವರ್ಷಗಳಿಂದ ಸರ್ಕಾರಿ ನೌಕರಿಯ ಕಾರಣ ಸಾಮಾಜಿಕ ರಾಜಕೀಯ ಜೀವನದಿಂದ ದೂರವಿದ್ದ ಸತ್ಯನಾರಾಯಣ ಅವರು 3 ತಿಂಗಳ ಹಿಂದೆ ವಯೋನಿವೃತ್ತಿ ಪಡೆದು ಮತ್ತೆ ಬಿಜೆಪಿ ಸಂಘಟನೆಯಲ್ಲಿ ಕಾಣಿಸಿಕೊಂಡಿದ್ದಾರೆ.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post