ಸರ್ಕಾರಿ ಸೇವೆಯಿಂದಾಗಿ ಪಕ್ಷದಿಂದ ದೂರ ಉಳಿದಿದ್ರು ಮೇಸ್ಟ್ರು
ಬಿಜೆಪಿ ಸಂಘಟನೆಗೆ ಬಲವರ್ಧನೆ
ಶನಿವಾರ ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನಡೆದ ಬಿಜೆಪಿ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ, ಬಸವಾನಿ ಪಿಯುಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ನಿವೃತ್ತರಾದ ಚಿಕ್ಕಲ್ಲಳ್ಳಿ ಸತ್ಯನಾರಾಯಣ ಮತ್ತೆ ಬಿಜೆಪಿ ಸಂಘಟನೆಗೆ ಜಿಗಿದ್ದಿದ್ದಾರೆ.
ಪಟ್ಟಣ ಪಂಚಾಯಿತಿ ಸದಸ್ಯ ಸಂದೇಶ ಜವಳಿ ಪಕ್ಕದಲ್ಲಿ ನಿಂತಿರುವ ಸತ್ಯನಾರಾಯಣ ಅವರ ಪರಿಚಯ ಬಹುತೇಕ ಕಾರ್ಯಕರ್ತರಿಗೆ ಇಲ್ಲ. "ಚಿಕ್ಕಲ್ಲಳ್ಳಿ ಸತ್ಯನಾರಾಯಣ" ಬಿಜೆಪಿಯಿಂದ ಹಾದಿಗಲ್ಲು ತಾ.ಪಂ. ಕ್ಷೇತ್ರದಿಂದ ಸದಸ್ಯರಾಗಿ ಸುಮಾರು ಇಪ್ಪತ್ತು ವರ್ಷದ ಹಿಂದೆ ಆಯ್ಕೆ ಆಗಿದ್ದರು. ಸದಸ್ಯರಾಗಿ ಇರುವಾಗಲೇ ವಿದ್ಯಾರ್ಹತೆ ಆಧಾರದಲ್ಲಿ ಬಸವಾನಿ ಪಿಯುಸಿ ಕಾಲೇಜಿನ ಉಪನ್ಯಾಸಕರಾಗಿ ಸರ್ಕಾರಿ ಸೇವೆಗೆ ಸೇರಿದರು.18 ವರ್ಷಗಳಿಂದ ಸರ್ಕಾರಿ ನೌಕರಿಯ ಕಾರಣ ಸಾಮಾಜಿಕ ರಾಜಕೀಯ ಜೀವನದಿಂದ ದೂರವಿದ್ದ ಸತ್ಯನಾರಾಯಣ ಅವರು 3 ತಿಂಗಳ ಹಿಂದೆ ವಯೋನಿವೃತ್ತಿ ಪಡೆದು ಮತ್ತೆ ಬಿಜೆಪಿ ಸಂಘಟನೆಯಲ್ಲಿ ಕಾಣಿಸಿಕೊಂಡಿದ್ದಾರೆ.