ಬೇಜವಾಬ್ದಾರಿ ಕೆಲಸದಿಂದ ಮೀಟರ್ ಬೋರ್ಡ್ ಶಾರ್ಟ್

ಮೆಸ್ಕಾಂನಿಂದ ಮೀಟರ್‌ ಸುಡುವ ಅಭಿಯಾನ...?
ಶಾರ್ಟ್‌ ಸರ್ಕ್ಯೂಟ್‌ ಭಯದಲ್ಲಿ ಗ್ರಾಹಕರು
ಅವೈಜ್ಞಾನಿಕವಾಗಿ ಅಲ್ಯೂಮಿನಿಯಂ, ಕಾಪರ್ ವೈರ್ ಜೋಡಣೆ

ಹಳೆಯ ಮರದ ಬೋರ್ಡ್‌ ಬದಲಿಗೆ ಅಳವಡಿಸಿದ ಕಬ್ಬಿಣದ ಬಾಕ್ಸ್‌ನಲ್ಲಿ ಬೆಂಕಿ
ಮೆಸ್ಕಾಂ ವತಿಯಿಂದ ಹಳೆಯ ಮರದ ಮೀಟರ್ ಬೋರ್ಡ್ ಬದಲಿಗೆ ಕಬ್ಬಿಣದ ಬೋರ್ಡ್ ಅಳವಡಿಕೆ ಕಾರ್ಯ ಭರದಿಂದ ಸಾಗಿದೆ. ಸಿಬ್ಬಂದಿಗಳು ಹೊಸ ಮೀಟರ್‌ ಬಾಕ್ಸ್‌ ಅಳವಡಿಸುವ ತರಾತುರಿಯಲ್ಲಿ ಅಲ್ಯೂಮಿನಿಯಂ, ಕಾಪರ್ ವೈರ್‌ ನೇರವಾಗಿ ಜಾಯಿಂಟ್ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದರಿಂದ ಶಾರ್ಟ್ ಸರ್ಕ್ಯೂಟ್ ಆಗುವ ಸಾಧ್ಯತೆ ಹೆಚ್ಚಿದೆ.

ತಾಲ್ಲೂಕಿನ ವಿವಿಧ ಭಾಗದಲ್ಲಿ ಈಗಾಗಲೇ ಗ್ರಾಹಕರು ಪದೇ ಪದೇ ಮೀಟರ್ ಬದಲಾಯಿಸುತ್ತಿದ್ದರು ಸಮಸ್ಯೆ ಬಗೆಹರಿಯುತ್ತಿಲ್ಲ. ಮೀಟರ್‌ ಬದಲಾವಣೆಗೆ ಬಂದ ಸಿಬ್ಬಂದಿಗಳ ಕೈ ಬಿಸಿ ಮಾಡುವುದು ಮಾತ್ರ ತಪ್ಪುತ್ತಿಲ್ಲ. ಈ ಕುರಿತು ಮೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.

ಅವೈಜ್ಞಾನಿಕ ಅಲ್ಯೂಮಿನಿಯಂ, ಕಾಪರ್‌ ವೈಯರ್‌ ಜೋಡಣೆ

ಎರಡು ಜಾತಿಯ ವೈರ್ಗಳು ಗುಣ, ಸ್ವಭಾವ ಬೇರೆಯದೆ ಆಗಿದೆ. ಇವೆರಡು ವೈರ್‌ಗಳ ಜೋಡಣೆ ಹೆಚ್ಚು ದಿನ ಬಾಳಿಕೆ ಬರುವುದಿಲ್ಲ. ಮೊದಲು ಸಣ್ಣ ಪ್ರಮಾಣದ ಘರ್ಷಣೆ ಏರ್ಪಟ್ಟು ಅಲ್ಯೂಮಿನಿಯಂ ವೈರ್‌ಗೆ ರಸ್ಟ್‌ ಹಿಡಿಯುತ್ತದೆ. ಈ ಹಂತದಲ್ಲಿ ಯಾವಾಗ ಬೇಕಾದರೂ ಬೆಂಕಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ತಾಂತ್ರಿಕವಾಗಿ ಪಕ್ವತೆ ಹೊಂದದ ಸಿಬ್ಬಂದಿಗಳು ಇಂತಹ ತಪ್ಪುಗಳನ್ನು ದಿನನಿತ್ಯ ಮಾಡುತ್ತಿದ್ದಾರೆ. ಇಲಾಖೆಯಿಂದ ಕೂಡ ಅವೈಜ್ಞಾನಿಕ ಕಾಮಗಾರಿಗೆ ಅವಕಾಶ ನೀಡಲಾಗಿದೆ. ವೈಜ್ಞಾನಿಕ ಉಪಕರಣಗಳ ಸರಬರಾಜು ಇಲ್ಲದಿರುವುದರಿಂದ ಪರಿಣತಿ ಪಡೆದ ಸಿಬ್ಬಂದಿಗಳೂ ಈ ಕೆಲಸವನ್ನು ಗೊತ್ತಿದ್ದು ಮಾಡಬೇಕಾದ ಅನಿವಾರ್ಯ ಎದುರಾಗಿದೆ.

ಅವೈಜ್ಞಾನಿಕ ಯೋಜನೆಯಿಂದ ಗ್ರಾಹಕರು ವಾರಕ್ಕೊಂದು ಹೊಸ ಮೀಟರ್‌ ಅಳವಡಿಸುವಂತಾಗಿದೆ. ಮನೆಯಲ್ಲಿದ್ದ ವಿದ್ಯುತ್‌ ಉಪಕರಣಗಳಾದ ಟಿವಿ, ಮಿಕ್ಸಿ, ಐರನ್‌ ಬಾಕ್ಸ್‌, ಫ್ರಿಡ್ಜ್‌, ವಾಷಿಂಗ್‌ ಮಷಿನ್‌ಗಳು ವಿದ್ಯುತ್‌ ವ್ಯತ್ಯಯದಿಂದ ಹಾಳಾಗುವುದು, ಸುಡುವುದು ನಡೆಯುತ್ತಿದೆ ಎಂದು ದೂರುತ್ತಿದ್ದಾರೆ.

ಶಾರ್ಟ್‌ನಿಂದಾಗಿ ಮಬ್ಬುಗಟ್ಟಿದ ಮೀಟರ್‌ ಬೋರ್ಡ್

ವಿದ್ಯುತ್‌ ಬಿಲ್‌ ಕಟ್ಟುವುದು ತ್ರಾಸ

ವಿದ್ಯುತ್‌ ಬಿಲ್‌ ಪಾವತಿಯಾಗಿದ್ದರೂ ಕೂಡ ಖಾತೆಯಲ್ಲಿ ಜಮಾ ಆಗುತ್ತಿಲ್ಲ. ಗ್ರಾಮೀಣ ಪ್ರದೇಶದವರು ಹಳೆಯ ಬಿಲ್‌ಗಳನ್ನು ಹಿಡಿದುಕೊಂಡು ಸರಿಮಾಡಿಸಿಕೊಳ್ಳಬೇಕು. ಇದು ಮೂರರಿಂದ ನಾಲ್ಕುದಿನ ಕಚೇರಿ ಅಲೆಯುವ ವಹಿವಾಟು.

ಕರೆಂಟು ದೂರು

ಸದ್ಯ ಮಳೆಗಾಲ ಆರಂಭವಾಗುತ್ತಿದೆ. ನೂರಾರು ಮರಗಳು ಹಳ್ಳಿ ಭಾಗದಲ್ಲಿ ಉರುಳುವ ಸಾಧ್ಯತೆ ಇದೆ. ಮೆಸ್ಕಾಂ ಅಧಿಕಾರಿಗಳು ಜಂಗಲ್‌ ಕಟ್ಟಿಗ್‌ ಕೆಲಸ ಇನ್ನೂ ಆರಂಭ ಮಾಡಿದಂತೆ ಕಾಣುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಒಮ್ಮೆ ಮರದ ಕೊಂಬೆ ಅಡ್ಡ ಬಿದ್ದರೆ ವಾರಗಟ್ಟಲೇ ಬುಡ್ಡಿದೀಪ ಹಿಡಿಯಬೇಕಾಗಿದೆ.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post