ಮರಗೆಸ ಎಲೆ ಕೀಳುವಾಗ ದುರ್ಘಟನೆ
ತೀರ್ಥಹಳ್ಳಿಯ ಲಕ್ಕಂದ
ಸಮೀಪದ ಮರವೊಂದರಲ್ಲಿ ಪತ್ರೊಡೆ ತಯಾರಿಸಲು ಬಳಸುವ ಮರಗೆಸ ಎಲೆ ಕೀಳುವಾಗ ಮರ ಏರಿದ್ದ ಯುವಕ ವಿದ್ಯುತ್
ಸ್ಪರ್ಶಿಸಿ ಮೃತಪಟ್ಟ ಘಟನೆ ಶುಕ್ರವಾರ ಸಂಭವಿಸಿದೆ.
ಮೇಗರವಳ್ಳಿಯ ಕುರುಣಾಪುರಕ್ಕೆ
ಹೋಗಿ ಹಿಂದಿರುಗುವಾಗ ಮರದ ಮೇಲೆ ಇದ್ದ ಮರಗೆಸವನ್ನು ಕೀಳಲು ತೆರಳಿದಾಗ ಆಕಸ್ಮಿಕವಾಗಿ 11 ಕೆವಿ ವಿದ್ಯುತ್
ತಂತಿ ಸ್ಪರ್ಶಿಸಿ ಶಾಕ್ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಮೃತ ಯುವಕನನ್ನು ಇಂದಿರಾನಗರ
ನಿವಾಸಿ ಅಭಿಷೇಕ್ ಶೆಟ್ಟಿ (28) ಎಂದು ಗುರುತಿಸಲಾಗಿದೆ.
ಅವಿವಾಹಿತನಾಗಿದ್ದ
ಅಭಿಷೇಕ್ ಶೆಟ್ಟಿಗೆ ತಂದೆ-ತಾಯಿ ಇರಲಿಲ್ಲ. ಚಿಕ್ಕಮನ ಮಗಳ ಮನೆಯಲ್ಲಿ ಅಭಿಷೇಕ್ ವಾಸವಾಗಿದ್ದರು.
ಘಟನೆ ಸಂಬಂಧಿಸಿದಂತೆ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
