ಮೀನು ಹಿಡಿಯುವ ಹುಡುಗರ ಮೇಲೆ ಹಲ್ಲೆ
ಗಾಯಾಳು ಮೆಗ್ಗಾನ್ ಆಸ್ಪತ್ರೆಗೆ ದಾಖಲು
ಮಂಡಗದ್ದೆ ಸಮೀಪ ನೆಲ್ಲಿಸರ ಕ್ಯಾಂಪ್ ಬಳಿ ಸುಮಾರು 10ಕ್ಕೂ ಹೆಚ್ಚು ಯುವಕರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಮೂವರು ವ್ಯಕ್ತಿಗಳು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ತೀರ್ಥಹಳ್ಳಿ ತಾಲ್ಲೂಕಿನ ನೆಲ್ಲಿಸರ ಕ್ಯಾಂಪ್ ನಲ್ಲಿ ಮೀನು ಹಿಡಿದು ಬದುಕು ಕಟ್ಟಿಕೊಂಡ ಬಡಪಾಯಿ ಯುವಕರು ದಿನನಿತ್ಯದ ಕೆಲಸಕ್ಕಾಗಿ ಸೋಮವಾರ ರಾತ್ರಿ ಮೀನು ಹಿಡಿಯಲು ತೆರಳಿದ್ದಾರೆ. ಮೀನು ಹಿಡಿದು ವಾಪಾಸ್ಸು ಬೈಕ್ ನಲ್ಲಿ ಹಿಂದಿರುಗುವ ಸಂದರ್ಭ ತಡರಾತ್ರಿ ಕುಡಿತದ ಅಮಲಿನಲ್ಲಿ ತೇಲುತ್ತಿದ್ದ ಕೆಲವು ಯುವಕರು ಕಾರು ರಸ್ತೆಗೆ ಅಡ್ಡಗಟ್ಟಿದ್ದರು. ಬೈಕಿಗೆ ಜಾಗ ಬಿಡುವಂತೆ ಕೇಳಿಕೊಂಡಿದ್ದಕ್ಕೆ ಮಾತುಕತೆ ನಡೆದಿದೆ. ವಾಗ್ವಾದ ಸಂದಾನಕ್ಕೆ ಬಂದಿದ್ದರಿಂದ ರಸ್ತೆ ಬಿಟ್ಟಿದ್ದಾರೆ. ನಂತರ ತೀರ್ಥಹಳ್ಳಿ ಮತ್ತು ಹಣಗೆರೆಕಟ್ಟೆಯ ಸುಮಾರು 10 ರಿಂದ 12 ಹುಡುಗರು ಲಾಂಗು, ಮಚ್ಚು ತೋರಿಸಿ ಮೀನು ಹಿಡಿಯಲು ಹೋಗಿದ್ದ ಮೂವರಿಗೆ ತಳಿಸಿದ್ದಾರೆ. ಓರ್ವ ಅಲ್ಲಿಂದ ಪರಾರಿಯಾಗಿದ್ದಾನೆ. ತೀವ್ರ ಗಾಯಗಳಾದ ಚೇತನ್ (28), ಜೀವನ್ (27), ಪ್ರಸಾದ್ (26) ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ತೀರ್ಥಹಳ್ಳಿಯ ನಿಹಾಲ್ ಕೋಬ್ರಾ ಎಂಬಾತನ ಸಂಗಡಿಗರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಹಲ್ಲೆಗೊಳಗಾದ ಯುವಕರನ್ನು ತಕ್ಷಣ ಜಯಚಾಮರಾಜೇಂದ್ರ ಆಸ್ಪತ್ರೆಗೆ ದಾಖಲಿಸಲಾಗಿದ್ದು ತೀವ್ರ ಸ್ವರೂಪದ ಗಾಯಗಳಾಗಿದೆ. ಬಡಪಾಯಿ ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ವ್ಯಕ್ತಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವುದರ ಜೊತೆಗೆ ತಾಲ್ಲೂಕು ಆಡಳಿತ ಯುವಕರ ನೆರವಿಗೆ ಧಾವಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಈ ಸಂಬಂಧ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.