ಸಾವಿರಾರು ಜಾತಿಯ ಬೀಜ ಬಿತ್ತನೆ
ಜೂನ್ 05 ರಿಂದ 12ರ ವರೆಗೆ ಅಭಿಯಾನ
ತೀರ್ಥಹಳ್ಳಿ ವಲಯಾರಣ್ಯ ವ್ಯಾಪ್ತಿಯ ಭಾರತೀಪುರ ಕಿರು ಅರಣ್ಯ ಪ್ರದೇಶದಲ್ಲಿ ಮೊರಾರ್ಜಿ ದೇಸಾಯಿ ವಿದ್ಯಾರ್ಥಿಗಳು, ತೀರ್ಥಹಳ್ಳಿಯ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ವಿವಿಧ ಜಾತಿಯ ಸಾವಿರಾರು ಬಿತ್ತನೆ ಬೀಜಗಳನ್ನು ಅರಣ್ಯ ಇಲಾಖೆ ವತಿಯಿಂದ ಹಾಕಲಾಯಿತು.
ಕರ್ನಾಟಕ
ಅರಣ್ಯ ಇಲಾಖೆ ಪರಿಸರ ದಿನಾಚರಣೆ ಅಂಗವಾಗಿ ಜೂನ್ 05 ರಿಂದ 12ರ ವರೆಗೆ ಅರಣ್ಯ ಭೂಮಿ ಮತ್ತು
ವಿವಿಧ ಸ್ಥಳಗಳಲ್ಲಿ ಬೀಜ ಬಿತ್ತನೆ ಅಭಿಯಾನ ಹಮ್ಮಿಕೊಂಡಿದೆ. ಅದರ ಅಂಗವಾಗಿ ಭಾನುವಾರ
ಭಾರತೀಪುರದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳ ನೇತೃತ್ವದಲ್ಲಿ ಬೀಜ ಬಿತ್ತನೆ ಕಾರ್ಯಕ್ರಮ
ಯಶಸ್ವಿಯಾಗಿ ನಡೆದಿದೆ.
ಈ
ಸಂದರ್ಭದಲ್ಲಿ ತೀರ್ಥಹಳ್ಳಿಯ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ
ಪ್ರಕಾಶ್ ಹೆಚ್.ಎಸ್. ವಲಯ ಅರಣ್ಯಾಧಿಕಾರಿ
ಅನಿಲ್ ಕುಮಾರ್ ಎಸ್., ಬಿ.ಜೆ.ಪಿ.
ತಾಲ್ಲೂಕು ಅಧ್ಯಕ್ಷ ಬಾಳೇಬೈಲು ರಾಘವೇಂದ್ರ ಬಿ.ಜೆ.ಪಿ. ಯುವ ಮೋರ್ಚಾ ಅಧ್ಯಕ್ಷ
ಸಂತೋಷ ದೇವಾಡಿಗ, ಕುಡುಮಲ್ಲಿಗೆ ಗ್ರಾಮ
ಪಂಚಾಯಿತಿ ಸದಸ್ಯ ಮಂಜುನಾಥ, ಶಿಕ್ಷಕ
ವೃಂದದವರು ಹಾಗೂ ಅರಣ್ಯ ಸಿಬ್ಬಂದಿ ಸ್ಥಳೀಯರು ಭಾಗವಹಿಸಿದ್ದರು.
(ಕಾರ್ಯಕ್ರಮದ
ವಿವರ:- ಹಸಿರು ಕರ್ನಾಟಕ ಇಲಾಖಾ ನೆಡುತೋಪು, ವಾಟಗಾರು, ದಿ: 08-06-2022, ಅಂದಗೆರೆ
ಎಂ.ಎಫ್. ದಿ: 09-06-2022, ಬುಕ್ಲಾಪುರ
ಗ್ರಾಮದ ಬ್ರಹ್ಮಗುಡ್ಡ ಪ್ರದೇಶ ದಿ: 10-06-2022).
