ಬಿಪಿಸಿಎಲ್ನಿಂದ ಗ್ರಾಹಕ ಸ್ನೇಹಿ
ಕಾರ್ಯಕ್ರಮ
ಕೃಷಿ ಉಪಕರಣ ಬಳಕೆ ಸಂಪೂರ್ಣ ಮಾಹಿತಿ
ತೀರ್ಥಹಳ್ಳಿ ಪಟ್ಟಣದ ಬಾಳೇಬೈಲಿನಲ್ಲಿರುವ
ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಸಂಸ್ಥೆಯ ವಿಕೆ ಫ್ಯೂಯಲ್ಸ್ ಪೆಟ್ರೋಲ್ ಬಂಕ್ನಲ್ಲಿ ಸೋಮವಾರ
ಕೃಷಿ ಉಪಕರಣಗಳ ಮಾಹಿತಿ, ಟ್ರಾಕ್ಟರ್ ಇಂಜಿನ್ ಆಯಿಲ್ ಬಿಡುಗಡೆ, ಪಿನೋ ಬ್ಯಾಂಕಿಂಗ್ ಸೌಲಭ್ಯಗಳ
ಮಾಹಿತಿ, ಕೃಷಿಗೆ ಸಂಬಂಧಿಸಿದ ವಿವಿಧ ಮಾಹಿತಿ ಮಳಿಗೆ ಒಳಗೊಂಡ ಕೃಷಿ ಉತ್ಸವ ಜರುಗಿತು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಬನಮ್
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೃಷಿಗೆ ಸಂಬಂಧಿಸಿದ ಸೌಲಭ್ಯಗಳ ಮಾಹಿತಿ ಮಲೆನಾಡು ಪ್ರದೇಶಕ್ಕೆ
ಅಗತ್ಯವಾಗಿದೆ. ಕೃಷಿಕರು ಇದರ ಉಪಯೋಗ ಪಡೆದುಕೊಳ್ಳಬೇಕು. ಗ್ರಾಹಕ ಸ್ನೇಹಿಯಾಗಿ ಕೆಲಸ ಮಾಡುತ್ತಿರುವ
ಬಿಪಿಸಿಎಲ್ ಕಂಪನಿ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಕೃಷಿ ಅಧಿಕಾರಿ ಕೌಶಿಕ್ ರೈತರಿಗೆ ಕೃಷಿ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತಿ ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ಪ.ಪಂ.ಸದಸ್ಯೆ ಗೀತಾ ರಮೇಶ್, ಬಿಪಿಸಿಎಲ್ ಕಂಪನಿಯ ಸಂದೀಪ್ ಹಾಗೂ ನಾಗರಾಜ್ ಅವರು ಉಪಸ್ಥಿತರಿದ್ದು ಮಾತನಾಡಿದರು. ವಿ.ಕೆ.ಫ್ಯೂಯಲ್ಸ್ನ ಡೀಲರ್ ಸುಚಿತ್ರಾ ರಮೇಶ್ ಶೆಟ್ಟಿ ಉಪಸ್ಥಿತರಿದ್ದರು. ಶಶಿಕುಮಾರ್ ಕಾರಂತ ಪ್ರಾರ್ಥಿಸಿದರು. ಟಿ.ಕೆ. ರಮೇಶ್ ಶೆಟ್ಟಿ ಸ್ವಾಗತಿಸಿದರು.
.jpg)