ಕುವೆಂಪು ವಿಶ್ವವಿದ್ಯಾಲಯದ ದೂರಶಿಕ್ಷಣ ಕೇಂದ್ರವು ನಡೆಸಿದ ಅರ್ಥಶಾಸ್ತ್ರ ವಿಷಯದ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಸಿಂಚನ ಎಸ್. 4ನೇ ರ್ಯಾಂಕ್ ಪಡೆದಿದ್ದಾರೆ. ಸಿಂಚನ ಹೊಸನಗರ ತಾಲ್ಲೂಕು ಆನೆಗದ್ದೆ ಗ್ರಾಮದ ಯಕ್ಷಗಾನ ಕಲಾವಿದ ಸತೀಶ್ ಹೆಗಡೆ, ಸಂಧ್ಯಾ ಹೆಗಡೆ ದಂಪತಿ ಪುತ್ರಿ. ಸಾಧನೆಯ ಮೂಲಕ ಕೀರ್ತಿ ತಂದ ಸಿಂಚನ ಅವರಿಗೆ ಆನೆಗದ್ದೆ ಗ್ರಾಮಸ್ಥರು ಅಭಿನಂದಿಸಿದ್ದಾರೆ. ಸಿಂಚನ ಮೂಲತಃ ಹರಳೀಮಠದ ಹೆಸರಾಂತ ಲೇಖಕ, ಸಾಹಿತಿ ಸರ್ಜಾ ಶಂಕರ್ ಹರಳೀಮಠ ಅವರ ಸಹೋದರಿ ಮಗಳು.
ಕುವೆಂಪು ವಿಶ್ವವಿದ್ಯಾಲಯದ ದೂರಶಿಕ್ಷಣ ಕೇಂದ್ರವು ನಡೆಸಿದ ಅರ್ಥಶಾಸ್ತ್ರ ವಿಷಯದ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಸಿಂಚನ ಎಸ್. 4ನೇ ರ್ಯಾಂಕ್ ಪಡೆದಿದ್ದಾರೆ. ಸಿಂಚನ ಹೊಸನಗರ ತಾಲ್ಲೂಕು ಆನೆಗದ್ದೆ ಗ್ರಾಮದ ಯಕ್ಷಗಾನ ಕಲಾವಿದ ಸತೀಶ್ ಹೆಗಡೆ, ಸಂಧ್ಯಾ ಹೆಗಡೆ ದಂಪತಿ ಪುತ್ರಿ. ಸಾಧನೆಯ ಮೂಲಕ ಕೀರ್ತಿ ತಂದ ಸಿಂಚನ ಅವರಿಗೆ ಆನೆಗದ್ದೆ ಗ್ರಾಮಸ್ಥರು ಅಭಿನಂದಿಸಿದ್ದಾರೆ. ಸಿಂಚನ ಮೂಲತಃ ಹರಳೀಮಠದ ಹೆಸರಾಂತ ಲೇಖಕ, ಸಾಹಿತಿ ಸರ್ಜಾ ಶಂಕರ್ ಹರಳೀಮಠ ಅವರ ಸಹೋದರಿ ಮಗಳು.
