ವೈಟ್‌ಬೋರ್ಡ್‌ ವಾಹನ ಟ್ಯಾಕ್ಸಿ ಶಿಕ್ಷಾರ್ಹ ಅಪರಾಧ

ಪ್ರಯಾಣಿಕರ ಜೀವಕ್ಕೆ ಯಾವುದೇ ರೀತಿಯ ಭದ್ರತೆ ಇರುವುದಿಲ್ಲ
ಸರ್ಕಾರಕ್ಕೂ ತೆರಿಗೆ ಮೋಸ - ಗಣೇಶ್‌ ಪ್ರಸಾದ್‌ ದೇವಾಡಿಗ ಎಚ್ಚರಿಕೆ

ವೈಟ್‌ ಬೋರ್ಡ್‌ ಕಾರುಗಳು ಸ್ಪಷ್ಟವಾಗಿ ಖಾಸಗಿ ಉಪಯೋಗಿ ವಾಹನಗಳಾಗಿದ್ದು ಇವುಗಳನ್ನು ಬಾಡಿಗೆ ಕಾರುಗಳನ್ನಾಗಿ ಉಪಯೋಗಿಸುವುದು ಶಿಕ್ಷಾರ್ಹ ಅಪರಾಧ. ಅಲ್ಲದೇ ವೈಟ್‌ ಬೋರ್ಡ್‌ ವಾಹನಗಳನ್ನು ಬಾಡಿಕಗೆಗೆ ಪಡೆದು ಪ್ರಯಾಣಿಸುವಾಗ ಅಪಘಾತವಾದಲ್ಲಿ ಪ್ರಯಾಣಿಕರಿಗೆ ಯಾವುದೇ ರೀತಿಯ ಜೀವ ವಿಮೆಯಾಗಲಿ ಸರ್ಕಾರದ ನೆರವಾಗಲಿ ದೊರೆಯುವುದಿಲ್ಲ.

ಇಂತಹ ಎಲ್ಲಾ ಸಂದರ್ಭಗಳಲ್ಲಿ ಕಾರು ಮಾಲೀಕನೆ ಎಲ್ಲದಕ್ಕೂ ಜವಾಬ್ದಾರಿಯಾಗಿರುತ್ತಾನೆ. ಹಾಗಾಗಿ ಇತ್ತೀಚೆಗೆ ಪ್ರದೇಶಿಕ ಸಾರಿಗೆ ಆಯುಕ್ತ ವಸಂತ್‌ ಚೌಹಾಣ್‌ ವೈಟ್‌ ಬೋರ್ಡ್‌ ವಾಹನ ಉಪಯೋಗಿಸಿಕೊಂಡು ಬಾಡಿಕೆ ಮಾಡಿಕೊಳ್ಳುತ್ತಿರುವ ಎಲ್ಲಾ ಮಾಲೀಕರು ಚಾಲಕರಿಗೆ ಒಂದು ವೇಳೆ ಪ್ರಯಾಣಿಸುವಾಗ ಸಿಕ್ಕಿಬಿದ್ದರೆ ವಾಹನವನ್ನೇ ಮುಟುಗೋಲು ಹಾಕಿಕೊಳ್ಳಬೇಕಾಗುತ್ತದೆ ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಸುರಕ್ಷತೆ ಹಾಗೂ ಆಕಸ್ಮಿಕ ಸಂದರ್ಭಗಳಲ್ಲಿ ನೆರವಿನ ದೃಷ್ಟಿಯಿಂದಲೂ ಎಲ್ಲೋ ಬೋರ್ಡ್‌ ಟ್ಯಾಕ್ಸಿಗಳಲ್ಲೇ ಪ್ರಯಾಣಿಸುವುದು ಉತ್ತಮ ಎಂದು ಸಾರ್ವಜಹನಿಕರಿಗೆ ವಿನಂತಿಸಿದ್ದಾರೆ. ಈ ಕುರಿತು ತೀರ್ಥಹಳ್ಳಿ ಎಲ್ಲೋ ಬೋರ್ಡ್‌ ಟ್ಯಾಕ್ಸಿ ವಾಹನಗಳ ಪರವಾಗಿ ಪ್ರತಿಕ್ರಿಯಿಸಿರುವ ಎಲ್ಲೋ ಬೋರ್ಡ್‌ ಟ್ಯಾಕ್ಸಿ ಮಾಲೀಕ, ಚಾಲಕ ಗಣೇಶ್‌ ಪ್ರಸಾದ್‌ ಎಲ್ಲೋ ಬೋರ್ಡ್‌ ಟ್ಯಾಕ್ಸಿ ವಾಹನಗಳ ಮಾಲೀಕರು ಸರ್ಕಾರಕ್ಕೆ ಎಲ್ಲಾ ರೀತಿಯ ತೆರಿಗೆಯನ್ನು ಅಧಿಕೃತವಾಗಿ ಕಟ್ಟಿರುತ್ತಾರಲ್ಲದೇ ಸುರಕ್ಷತೆ ಹಾಗೂ ನಂಬಿಕೆಯ ದೃಷ್ಟಿಯಿಂದಲೂ ಪ್ರಯಾಣಿಕ ಸ್ನೇಹಿಯಾಗಿರುತ್ತಾರೆ. ವೈಟ್‌ ಬೋರ್ಡ್‌ ವಾಹನಗಳಲ್ಲಿ ಪ್ರಯಾಣಿಕನನ್ನು ಸಾಗಿಸುವುದೇ ಅಪರಾಧ. ಅಲ್ಲದೇ ಸುರಕ್ಷತಾ ದೃಷ್ಟಿಯಿಂದಲೂ ಪ್ರಯಾಣಿಕರಿಗೂ ಇದು ಯಾವ ಕಾರಣಕ್ಕೂ ಒಳ್ಳೆಯದಲ್ಲ. ಹಾಗಾಗಿ ವೈಟ್‌ ಬೋರ್ಡ್‌ ಕಾರು ಮಾಲೀಕರು ಟ್ಯಾಕ್ಸಿ ರೀತಿ ಬಾಡಿಗೆಗೆ ಬಿಡುವುದನ್ನು ಉಗ್ರವಾಗಿ ಖಂಡಿಸುತ್ತೇವೆ ಅಲ್ಲದೇ ಪ್ರಯಾಣಿಕರಿಗೂ ಕೂಡ ಇದು ಯಾವುದೇ ರೀತಿಯಲ್ಲಿ ಸುರಕ್ಷಿತವಲ್ಲ ಎಂದು ವಿನಂತಿಸುವುದಾಗಿ ಎಲ್ಲೋ ಬೋರ್ಡ್‌ ಟ್ಯಾಕ್ಸಿ ಚಾಲಕರು ಹಾಗೂ ಮಾಲಕರ ಪರವಾಗಿ ಹೇಳಿದ್ದಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post