ತೀರ್ಥಹಳ್ಳಿಯಲ್ಲಿ ಜೆಡಿಎಸ್ ಶಕೆ ಆರಂಭ
ಈಗಾಗಲೇ ಜೆಡಿಎಸ್ ಪಕ್ಷದ ವಿಧಾನಸಭಾ ಅಭ್ಯರ್ಥಿಯೆಂದು ಪಕ್ಷದಿಂದ ಘೋಷಿಸಲ್ಪಟ್ಟಿರುವ ಯಡೂರು
ರಾಜಾರಾಂ ಮಾತನಾಡಿ ರಾಜಕೀಯವಾಗಿ ತೀರ್ಥಹಳ್ಳಿಯಲ್ಲಿ ಹೊಸಶಕೆ ಆರಂಭಿಸುವುದು ನಮ್ಮೆಲ್ಲರ ಗುರಿ
ಹಿರಿಯರ ಮಾರ್ಗದರ್ಶನದಲ್ಲಿ ಯುವಕರ ಮನಗೆಲ್ಲುವುದು ನಮ್ಮ ಮುಂದಿನ ಸವಾಲು. ತೀರ್ಥಹಳ್ಳಿ
ಕ್ಷೇತ್ರವನ್ನು ಪ್ರವಾಸೋಧ್ಯಮ ತಾಣವಾಗಿ ಮಾರ್ಪಡಿಸುವುದು ಹಾಗೂ ಇಡೀ ತಾಲ್ಲೂಕಿಗೆ ನೀರಾವರಿ
ವ್ಯವಸ್ಥೆಯನ್ನು ಕಲ್ಪಿಸುವುದು ಮಾಜಿ ಸಿಎಂ ಕುಮಾರಸ್ವಾಮಿ ಅವರ ಕಲ್ಪನೆಯಾಗಿದೆ. ಅವರ
ಮಾರ್ಗದರ್ಶನದಲ್ಲಿ ನಡೆಯಲಿದ್ದೇವೆ ಎಂದು ಹೇಳಿದರು.
ತೀರ್ಥಹಳ್ಳಿಯಲ್ಲಿ
ಜೆಡಿಎಸ್ ಪಕ್ಷಕ್ಕೆ ಭವ್ಯವಾದ ಪರಂಪರೆ ಇದೆ. ಪಕ್ಷವನ್ನು ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ
ತರುವ ಮೂಲಕ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ಕೈ
ಬಲಪಡಿಸುವುದು ಪಕ್ಷದ ಗುರಿಯಾಗಿದೆ ಎಂದು ತೀರ್ಥಹಳ್ಳಿ ಕುವೆಂಪು ವೃತ್ತದಲ್ಲಿ ಜೆಡಿಎಸ್ ಕಚೇರಿ
ಉದ್ಘಾಟಿಸಿ ಜಿಲ್ಲಾಧ್ಯಕ್ಷ ಎಂ.ಬಿ. ಶ್ರೀಕಾಂತ್ ಹೇಳಿದರು.
ಯಾರೇ ಪಕ್ಷ ತೊರೆದರೂ ಕೂಡ
ಕಾರ್ಯಕರ್ತರು ವಿಚಲಿತವಾಗಿಲ್ಲ. ಅಪ್ಪಟ ಮಣ್ಣಿನ ಮಕ್ಕಳ ಪಕ್ಷವಾದ ಜೆಡಿಎಸ್ಗೆ ತೀರ್ಥಹಳ್ಳಿಯಲ್ಲಿ
ಬೆಂಬಲ ಗುಪ್ತಗಾಮಿನಿಯಂತೆ ವ್ಯಕ್ತವಾಗುತ್ತಿದೆ ಎಂದರು.
ಮಾಜಿ ಶಾಸಕಿ ಶಾರದಾ ಪೂರ್ಯನಾಯ್ಕ್ ಮಾತನಾಡಿ, ಜೆಡಿಎಸ್ ಅಧಿಕಾರವಧಿಯಲ್ಲಿ ಗ್ರಾಮೀಣ ಪ್ರದೇಶಕ್ಕೆ ವಿಶೇಷ ಆದ್ಯತೆ ನೀಡಿದ್ದೇವೆ.
ಕೋಟ್ಯಾಂತರ ರೂಪಾಯಿ ಅನುದಾನ ಒದಗಿಸಲಾಗಿದೆ. ಹೊನ್ನೇತಾಳು ಶಾಲಾ ವಿದ್ಯಾರ್ಥಿ ಅಶಿಕಾ ಸಾವಿನಿಂದ
ಮನನೊಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಾಲಸಂಕಗಳಿಗೆ ವಿಶೇಷ ಅನುದಾನ ಕಲ್ಪಿಸಿದ್ದರು ಎಂದು
ತಿಳಿಸಿದರು.
ಜಿಲ್ಲಾ ಜೆಡಿಎಸ್ ಕಾರ್ಯದರ್ಶಿ ಕೆ.ಎನ್. ರಾಮಕೃಷ್ಣ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಕುಣಜೆ ಕಿರಣ್ ಪ್ರಭಾಕರ್, ಮುಖಂಡರಾದ ಹೆದ್ದೂರು ನಟರಾಜ್, ಯೋಗೀಶ್, ಆರ್.ಎ. ಬಾಬುಸಾಬ್, ಯುವ ಘಟಕದ ಅಧ್ಯಕ್ಷ ತಲಬಿ ರಾಘವೇಂದ್ರ ಇದ್ದರು.
