3ನೇ ತರಗತಿ ಮಗುವಿನ ಅಭಿಲಾಷೆಗೆ ಸಹಕಾರಿಯಾಗಿ ನಿಂತ ಹರ್ಷಿತ ರಂಗನಾಥ್
ದತ್ತು ಪಡೆದು ಬ್ಯಾಗ್, ನೋಟ್ ಬುಕ್, ಸಮವಸ್ತ್ರ ವಿತರಣೆ
3ನೇ ತರಗತಿ ಪುಟ್ಟ ಬಾಲಕಿ ಗಾನವಿ ಕೋವಿಡ್ 19ರ ಸಂದರ್ಭದಲ್ಲಿ
ತಂದೆಯನ್ನು ಕಳೆದುಕೊಂಡಿದ್ದಳು. ಪುಟ್ಟ ಬಾಲಕಿಗೆ ಆಸರೆಯಾಗಿ ತಾಯಿ ಮಕ್ಕಿಮನೆ ಪವಿತ್ರ ನಿಂತಿದ್ದಾಳೆ.
ಆಕೆಯ ಬದುಕು, ಸಂಸಾರ ಎಲ್ಲದರ ನಡುವೆ ಮಗಳ ವಿದ್ಯಾಭ್ಯಾಸದ ಚಿಂತೆ ಆಕೆಯನ್ನು ಭಾಧಿಸಿತ್ತು. ಆಗ ಬೆಟ್ಟಮಕ್ಕಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಲತಾ ರಾಜ್ ಕುಮಾರ್ ಕಳೆದ ವರ್ಷಕ್ಕೆ ಬೇಕಾದ
ಪಠ್ಯ ಪರಿಕರ ವಿತರಿಸಿದ್ದಾರೆ. ಪ್ರಸ್ತುತ ದಾನಿಗನ್ನು ಹುಡುಕಿದಾಗ ಅವರಿಗೆ ಕಾಣಿಸಿದ್ದು ಬೆಟ್ಟಮಕ್ಕಿಯ
ರಂಗನಾಥ ಭಟ್ಟರ ಮಗಳು ಹರ್ಷಿತಾ.
ಹರ್ಷಿತಾ ತನಗೆ ಗೊತ್ತಿರುವ ಎಲ್ಲಾ ಪ್ರಯತ್ನಗಳನ್ನು ಮಾಡಿದ ನಂತರ
ಸ್ನೇಹಿತೆ ಕೆನಡಾ ದೇಶದಲ್ಲಿ ವೃತ್ತಿ ನಿರ್ವಹಿಸುತ್ತಿರುವ ಬೆಂಗಳೂರು ಮೂಲದ ಸೌಜನ್ಯ ಅವರನ್ನು ಸಂಪರ್ಕಿಸಿದ್ದಾಳೆ.
ಸೌಜನ್ಯ ಈಗಾಗಲೇ ಹಲವು ವಿದ್ಯಾರ್ಥಿಗಳಿಗೆ ಇಂಜಿನಿಯರ್ ನಂತಹ ಶಿಕ್ಷಣ ಕೊಡಿಸುತ್ತಿದ್ದು, ಪ್ರಸ್ತುತ
3ನೇ ತರಗತಿ ಓದುತ್ತಿರುವ ಗಾನವಿ ಡಾಕ್ಟರ್ ಆಗುವ ಇಂಗೀತ ಹೊರಹಾಕಿದ್ದಾಳೆ. ತಕ್ಷಣ ಮಗುವಿನ ಸಂಪೂರ್ಣ
ಜವಾಬ್ದಾರಿ ನಿಭಾಯಿಸುತ್ತೇನೆಂದು ಮಗುವಿನ ಸಂಪೂರ್ಣ ಉನ್ನತ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗಿ ನಿಲ್ಲುವುದಾಗಿ
ತಿಳಿಸಿದ್ದಾರೆ.
ಪುಟ್ಟ ಬಾಲಕಿಗೆ ನೆರವಾಗಲು ಬಂದಿರುವ ಹರ್ಷಿತಾ, ಸೌಜನ್ಯ ಇಬ್ಬರಿಗೂ
ಶಾಲಾಭಿವೃದ್ದಿ ಸಮಿತಿ, ಶಿಕ್ಷಕರು ಕೃತಜ್ಞತೆ ಸಲ್ಲಿಸಿದ್ದಾರೆ.