ಅಕ್ರಮ ಬಂದೂಕು ಮಾರಾಟ
ಮಾಳೂರು ಠಾಣೆಯಲ್ಲಿ ವಿಚಾರಣೆ
ಪ್ರಕರಣ ಮುಚ್ಚಲು ಗೃಹಸಚಿವರ ಆಪ್ತರ ಹರಸಾಹಸ
ಕಳ್ಳ ನಾಡಬಂದೂಕು ಮಾರಾಟ ಜಾಲ ಬಹಿರಂಗವಾಗುವ ಸಾಧ್ಯತೆ
ಪೊಲೀಸರು ಕ್ರಮ ಕೈಗೊಳ್ಳುವರೇ...?
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಅಕ್ರಮ ನಾಡ ಬಂದೂಕು ದಾಸ್ತಾನು ಮತ್ತು ಮಾರಾಟ ಜಾಲ ಕಾರ್ಯನಿರ್ವಹಿಸುತ್ತಿದೆ. ಭದ್ರಾವತಿ ಗ್ರಾಮಾಂತರ ಪೊಲೀಸರು ಶೋಧ ನಡೆಸಿದಾಗ ಶಂಕರಘಟ್ಟ ನಿವಾಸಿ ಪಾಲಾಕ್ಷಪ್ಪ (47) ಬಳಿ ಸುಮಾರು ವಿವಿಧ ಮಾದರಿಯ 9 ನಾಡ ಬಂದೂಕು ಲಭ್ಯವಾಗಿದೆ.
ಪಾಲಕ್ಷಪ್ಪನ ವಿಚಾರಣೆ ವೇಳೆ ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ಸಮೀಪದ ಹಳಗ ಗ್ರಾಮದ ಮನೋಜ್ (26) ಕೃಷ್ಣಮೂರ್ತಿ (46) ಅವರ ಹೆಸರು ಹೊರಗೆ ಬಂದಿದ್ದು ಹೆಚ್ಚನ ವಿಚಾರಣೆ ನಡೆಸಲಾಗುತ್ತಿದೆ.
ಕಾನೂನು ಬಾಹಿರವಾಗಿ ಅಕ್ರಮ ನಾಡಬಂದೂಕು ತಯಾರಿ ಮತ್ತು ಮಾರಾಟ ಜಾಲ ಪತ್ತೆಯಾಗುವ ಸಾಧ್ಯತೆ ಇದೆ. ಈ ಜಾಲದ ಹಿಂದೆ ಕ್ಷೇತ್ರದ ಪ್ರಭಾವಿ ಮುಖಂಡರು ಭಾಗಿಯಾಗಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿದೆ. ಗೃಹಸಚಿವರ ಆಪ್ತರು ಆರೋಪಿಗಳನ್ನು ಬಿಡಿಸಲು ಹರಸಾಹಸ ಪಡುತ್ತಿರುವ ಆರೋಪ ಕೇಳಿ ಬಂದಿದೆ. ಪೊಲೀಸರು ಒತ್ತಡಕ್ಕೆ ಮಣಿದು ಆರೋಪಿಗಳನ್ನು ರಕ್ಷಿಸುವ ಅನುಮಾನ ಮನೆ ಮಾಡಿದೆ.