ತಾಲ್ಲೂಕು ಕಚೇರಿಗೆ ಕುದುರೆಗಳ ಭೇಟಿ
ಸಿಬ್ಬಂದಿಗಳ ಕಾರ್ಯಕ್ಷಮತೆಗೆ ನೈಜ ಸಾಕ್ಷಿ
ಸಾರ್ವಜನಿಕರ ಕೆಲಸಕ್ಕೂ ಇದೆ ರೀತಿಯ ಬೆಲೆ
ಯಾರೂ ಓಡಿಸುವವರಿಲ್ಲ...!
ಕುದುರೆ, ಕತ್ತೆಗಳಂತೆ ನಾವೂ-ನೀವೂ...!
ಇದೇನ್ ಗತಿ...!
ತೀರ್ಥಹಳ್ಳಿಯ ತಾಲ್ಲೂಕು ಆಡಳಿತ ಕೆಲವೊಮ್ಮೆ ಮೈಚಳಿ ಬಿಟ್ಟು ಕೆಲಸ ಮಾಡಿದರೆ ಕೆಲವು ಸರತಿ ಹೊದ್ದು ಮಲಗಿರುತ್ತದೆ. ಶಂಕರಪ್ಪ ಕುಟುಂಬಕ್ಕೆ ಪರಿಹಾರ ಒದಗಿಸುವಲ್ಲಿ ತ್ವರಿತ ಕಾನೂನು ಕ್ರಮ ಕೈಗೊಂಡು ಸಾರ್ವಜನಿಕರಿಂದ ಪ್ರಶಂಸೆ ಪಡೆದಿದೆ. ಇನ್ನೊಂದು ಕಡೆಯಲ್ಲಿ ಕಚೇರಿಗೆ ಕತ್ತೆ, ಕುದುರೆ ಎಂಟ್ರಿ ಕೊಟ್ರು ಓಡಿಸಲು ಆಗದ ಮಹಾನುಭಾವರಿಂದ ತುಂಬಿದೆ ಎಂಬುದನ್ನು ಸಾಭೀತಾಗಿದೆ.
ಬಹುಶಃ ಮೂಕ ಪ್ರಾಣಿಗಳು ಮಧ್ಯವರ್ತಿಗಳನ್ನು ಅರಸಿ ಬಂದಿವೆ. ಹಾಗಾಗಿ ನೇರವಾಗಿ ಒಳಗೆ ಎಂಟ್ರಿ ಪಡೆದಿವೆ. ಇವುಗಳನ್ನೂ ಓಡಿಸಲಾಗದ ಹೀನಾಯ ಸ್ಥಿತಿಗೆ ತಾಲ್ಲೂಕು ಕಚೇರಿ ಸಿಬ್ಬಂದಿ ತಲುಪಿದ್ದಾರೆ. ಎಷ್ಟೋ ಬಾರಿ ಕೆಲಸಗಳಿಗಾಗಿ ಪೈಲ್ ಹಿಡಿದು ಆಗಮಿಸುವ ಸಾರ್ವಜನಿಕರ ಕೆಲಸ ಕೂಡ ಇದೇ ರೀತಿ ಯಾರು ಮೂಸುವವರು ಇಲ್ಲ. ಹೇಳುವವರಿಂದ, ಕೇಳುವವರಿಂದ, ಇಲ್ಲವೇ ಕೈಬಿಸಿಯಿಂದ ಮಾತ್ರ ಕೆಲಸ ಮಾಡಿಕೊಳ್ಳಬೇಕಾಗಿದೆ...!