ಡಿಕೆಶಿಗೆ ಪಿಕಪ್-ಡ್ರಾಪ್ ಮಾಡಿದ ಕಾರು ಯಾರದ್ದು...?
ಶಿವಮೊಗ್ಗದ ಜನದನಿ ಬೃಹತ್ ಪ್ರತಿಭಟನಾ ಸಭೆಗೆ ಹೆಲಿಕಾಪ್ಟರ್ ನಲ್ಲಿ ಆಗಮಿಸಿದ್ದ ಡಿಕೆಶಿಗೆ ಕಾರಿನ ವ್ಯವಸ್ಥೆ ಕಲ್ಪಿಸಿದ್ದೆ ಆರ್.ಎಂ. ಮಂಜುನಾಥ ಗೌಡರು. ಗೌಡರ ಕಟ್ಟಾ ಬೆಂಬಲಿಗರೊಬ್ಬರ ಫಾರ್ಚೂನರ್ ಕಾರಿನಲ್ಲಿ ಡಿಕೆಶಿಗೆ ಹೆಲಿಪ್ಯಾಡ್ ನಿಂದ ಕರೆತರಲಾಗಿದೆ.
ಗೌಡರಿಗೆ ಆಪ್ತರಾಗಿರುವ ಡಿಕೆಶಿ ಅವರು ಶಿವಮೊಗ್ಗಕ್ಕೆ ಆಗಮಿಸುತ್ತಾರೆ ಎಂದಾಕ್ಷಣ ಬೆಂಬಲಿಗರೊಬ್ಬರ ಫಾರ್ಚೂನರ್ ಕಾರು ಕಳಿಸಿದ್ದಾರೆ. ಕಾರಿನಲೇ ತೀರ್ಥಹಳ್ಳಿ ಕ್ಷೇತ್ರದ ಬಹಳ ಮುಖ್ಯ ರಾಜಕೀಯ ಚರ್ಚೆ ನಡೆದಿದೆ. ಹೀಗಾಗಿ ವೇದಿಕೆ ಕಾರ್ಯಕ್ರಮದಲ್ಲೂ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ಭಾಷಣಕ್ಕೆ ಅವಕಾಶ ನೀಡಲಿಲ್ಲ ಎಂಬುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.