ಕಾಂಗ್ರೆಸ್‌ನಲ್ಲಿ ಹಠವಾದಿ ಕಿಮ್ಮನೆಯ ಪೊಸಿಷನ್‌ ಏನು…?

ಜಿಲ್ಲಾ ಕಾಂಗ್ರೆಸ್‌ ಬ್ಯಾನರ್‌ನಲ್ಲಿ ಕಿಮ್ಮನೆ ಹೆಸರಿಲ್ಲ! ಭಾಷಣಕ್ಕೂ ಅವಕಾಶ ಇಲ್ಲ
ಕಾಂಗ್ರೆಸ್‌ನಲ್ಲಿ ಹಠವಾದಿ ಕಿಮ್ಮನೆಯ ಪೊಸಿಷನ್‌ ಏನು…?
ಅಚ್ಚರಿಯ ರಾಜಕಾರಣಕ್ಕೆ ತೀರ್ಥಹಳ್ಳಿ ಸಜ್ಜು
ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಯಾರು…?
ಕೆರಳಿ ನಿಂತರೇ ಕಿಮ್ಮನೆ


ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಲು ಪಣ ತೊಟ್ಟಿರುವ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಅವರ ಪೊಸಿಷನ್‌ ಕಾಂಗ್ರೆಸ್‌ನಲ್ಲಿ ಏನು? ಈ ಪ್ರಶ್ನೆ ಇಂದಿನಿಂದ ಆರಂಭವಾಗಿದೆ. ಕಾಂಗ್ರೆಸ್‌ನ ಘಟಾನುಘಟಿ ನಾಯಕರ ನೇತೃತ್ವದಲ್ಲಿ ಶಿವಮೊಗ್ಗದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಭಾಷಣಕ್ಕೂ ಕಿಮ್ಮನೆಗೆ ಅವಕಾಶ ಕೊಟ್ಟಿಲ್ಲ. ಜಿಲ್ಲಾ ಕಾಂಗ್ರೆಸ್‌ ಕಚೇರಿಯ ಮುಂಭಾಗ ಜೋಡಿಸಿದ್ದ ಬ್ಯಾನರ್‌ರಲ್ಲೂ ಕಿಮ್ಮನೆ ಫೋಟೊವಿಲ್ಲ.

ಬಿಜೆಪಿ ದುರಾಡಳಿತ ಖಂಡಿಸಿ ಗೃಹಸಚಿವ ಆರಗ ಜ್ಞಾನೇಂದ್ರ ಅವರ ಸ್ವಂತ ಊರಾದ ಗುಡ್ಡೇಕೊಪ್ಪದಿಂದ ಶಿವಮೊಗ್ಗದ ವರೆಗೆ 5 ದಿನ ಸುಮಾರು 70 ಕಿ.ಮೀ. ದೂರ ಪಾದಯಾತ್ರೆ ನಡೆಸಿದ ಕಿಮ್ಮನೆಗೆ ಕಾಂಗ್ರೆಸ್‌ ಮುಖಂಡರು ಇದೀಗ ಅಪಮಾನ ಮಾಡಿದ್ದಾರೆಯೇ… ಎಂಬ ಆಕ್ರೋಶದಲ್ಲಿ ಈಗ ಕಿಮ್ಮನೆ ಬೆಂಬಲಿಗರು ಬೀದಿಗಿಳಿದಿರುವುದು ಕಾಂಗ್ರೆಸ್‌ ನಲ್ಲಿ ಲೇಟೆಸ್ಟ್‌ ಬೆಳವಣಿಗೆಯಾಗಿದೆ.

ಹಠವಾದಿ ಕಿಮ್ಮನೆ ಕಾಂಗ್ರೆಸ್‌ ಮುಖಂಡರ ಈ ವರ್ತನೆಗೆ ಸೆಟೆದು ನಿಲ್ಲುವುದು ಬಹುತೇಕ ಖಚಿತ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮೊದಲಿನಿಂದಲೂ ಕಿಮ್ಮನೆಗೆ ಬ್ರೇಕ್‌ ಹಾಕುತ್ತಲೇ ಇದ್ದಾರೆ. ಇದರ ಮುಂದುವರೆದ ಭಾಗವೇ ಶಿವಮೊಗ್ಗದಲ್ಲಿ ಕಿಮ್ಮನೆಗೆ ಆಗಿರುವ ಅಪಮಾನ. ಹೆಲಿಕಾಪ್ಟರ್‌ ನಲ್ಲಿ ತೆರಳಬೇಕು ಎಂಬ ಗಡಿಬಿಡಿ ನೆಪದಲ್ಲಿ ಕಿಮ್ಮನೆಗೆ ಭಾಷಣಕ್ಕೆ ಅವಕಾಶ ನೀಡದೇ ಡಿಕೆಶಿ ಸಭೆಯನ್ನು ಬರ್ಕಾಸ್ಥ್‌ಗೊಳಿಸಿ ಹೊರಟ ಹಿಂದೆ ರಾಜಕೀಯ ಕಾರಣಗಳಿರುವುದು ಗುಟ್ಟಲ್ಲ. ಕ್ಷೇತ್ರದಲ್ಲಿ ಕಿಮ್ಮನೆ ವಯಕ್ತಿಕ ನೆಲಗಟ್ಟಿನಲ್ಲಿ ಬಾರೀ ಬೆಂಬಲ ಗಳಿಸಿದ್ದು ಅವರನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಿಯೇ ತೀರುತ್ತೇವೆ ಎಂದು ಕಾರ್ಯಕರ್ತರು ಪಣ ತೊಟ್ಟಿರುವುದು ರಾಜಕೀಯವಾಗಿ ಕುತೂಹಲಕಾರಿಯಾಗಿದೆ. ಕಿಮ್ಮನೆ ರತ್ನಾಕರ್‌ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ನಿಂದ ಸ್ಪರ್ಧಿಸುವರೇ, ಇಲ್ಲವೇ ಎಂಬ ಪ್ರಶ್ನೆಯೂ ಉದ್ಬವಿಸುವಂತೆ ಮಾಡಿದೆ.

ಪ್ರತಿಭಟನಾ ಸಭೆಯಲ್ಲಿ ಕಿಮ್ಮನೆ ಕೇವಲ ಜೈಕಾರ ಹಾಕಿ ವೇದಿಕೆಯಿಂದ ಕೆಳಗಿಳಿದು ತೆರಳಿದ್ದು ಕಾರ್ಯಕರ್ತರ ದುಃಖಕ್ಕೆ ಕಾರಣವಾಗಿದ್ದು, ಜಿಲ್ಲಾ ಕಾಂಗ್ರೆಸ್‌ನ ಕೆಲ ಮುಖಂಡರ ಕುತಂತ್ರವೇ ಈ ಬೆಳವಣಿಗೆಗೆ ಕಾರಣವೆಂಬುದು ಕಾರ್ಯಕರ್ತರ ದೂರಾಗಿದೆ.

ಕಿಮ್ಮನೆ ಈಗಿನ ಬೆಳವಣಿಗೆಯಿಂದ ಮನನೊಂದು ರಾಜಕೀಯವಾಗಿ ಬೇರೆಯೇ ನಿರ್ಧಾರ ತಳೆದರೂ ಅಚ್ಚರಿ ಇಲ್ಲ. ಡಾಕ್ಟರ್‌ ಹೇಳಿದ್ದು ಹಾಲು ಅನ್ನ, ರೋಗಿ ಬಯಸಿದ್ದು ಹಾಲು ಅನ್ನ ಎಂಬಂತೆ ಕಾಂಗ್ರೆಸ್‌ನಲ್ಲಿನ ಒಳ ಜಗಳವನ್ನು ಕ್ಷೇತ್ರದಲ್ಲಿ ಬಿಜೆಪಿ ಹದ್ದುಗಣ್ಣಿನಿಂದ ಕಾಯುತ್ತಿದೆ.






ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post