ಆಗುಂಬೆ ಪಿಎಸ್ಐ ಶಿವನಗೌಡ ತಂಡದ ಕಾರ್ಯಾಚರಣೆ
ಏಪ್ರಿಲ್ 21 ರಂದು ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಕುಂದ ಗ್ರಾಮದ ಒಂಟಿ ಮಹಿಳೆ ವಾಸವಿದ್ದ ಮನೆಯಲ್ಲಿ ಅಪರಿಚಿತ ಆರೋಪಿತರಿಂದ ಸುಲಿಗೆಯಾಗಿದ್ದು ಈ ಬಗ್ಗೆ ಠಾಣಾ ಗುನ್ನೆ ನಂ: 33/2026 ಕಲಂ: 309(6), 329(4), 127(2) ರೆ/ವಿ 3(5) ಬಿ.ಎನ್.ಎಸ್ ಪ್ರಕರಣ ದಾಖಲಾಗಿರುತ್ತದೆ.
ಸದರಿ ತನಿಖಾ ತಂಡವು ಪ್ರಕರಣದ ಆರೋಪಿತರಾದ 1) ಭರತ್.ವೈ @ ಭಟ್ಟ, 25 ವರ್ಷ, ವಾಸ ಜೇಡಿಕಟ್ಟೆ, ಹೊಸೂರು, ತವಲಗುಂದಿ ಪೋಸ್ಟ್, ಭದ್ರಾವತಿ (ತಾ), 2) ಅಶೋಕ, 28 ವರ್ಷ, ಜಾವಳ್ಳಿ ಗ್ರಾಮ, ಶಿವಮೊಗ್ಗ, 3) ಮಹಮ್ಮದ್ ಇಬ್ರಾಹಿಂ ಮೀರಾ @ ಟಕ್ಕರ್, 24 ವರ್ಷ, ವೀರಾಪುರ, ಭದ್ರಾಕಾಲೋನಿ, ಭದ್ರಾವತಿ (ತಾ) ಮತ್ತು 4) ಪಾರ್ತಿಪ್, 25 ವರ್ಷ, ಮೇಲಿನ ಕುರುವಳ್ಳಿ, ತೀರ್ಥಹಳ್ಳಿ (ತಾ) ರವರುಗಳನ್ನು ದಸ್ತಗಿರಿ ಮಾಡಿ, ಆರೋಪಿತರಿಂದ ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ 1) 70 ಗ್ರಾಂ ಬಂಗಾರದ ಆಭರಣಗಳು , ಅಂದಾಜು ಮೌಲ್ಯ 10 ಲಕ್ಷ 80,000/-ರೂಗಳು, 2) 56 ಗ್ರಾಂ ಬೆಳ್ಳಿ ವಸ್ತುಗಳ, ಅಂದಾಜು ಮೌಲ್ಯ 16,700/-ರೂಗಳು, 3) ಕೃತ್ಯಕ್ಕೆ ಬಳಸಿದ ಸ್ಕೂಟಿ ಅಂದಾಜು ಮೌಲ್ಯ 50,000/- ರೂಗಳು, 4) ಕೃತ್ಯಕ್ಕೆ ಬಳಸಿದ ಇನ್ನೊಂದು ಸ್ಕೂಟಿ, ಅಂದಾಜು ಮೌಲ್ಯ 50,000/- ರೂಗಳು ಸೇರಿ ಒಟ್ಟು 11 ಲಕ್ಷ 96700/- ರೂಗಳ ಮಾಲನ್ನು ವಶಪಡಿಸಿಕೊಂಡಿರುತ್ತಾರೆ.
ಪ್ರಕರಣದ ಪತ್ತೆಗಾಗಿ ಪೊಲೀಸ್ ಅಧೀಕ್ಷಕ ನಿಖಿಲ್.ಬಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರಿಯಪ್ಪ. ಎ.ಜಿ., ಡಿವೈಎಸ್ಪಿ ಅರವಿಂದ ಕಲಗುಜ್ಜಿ, ಪಿಐ ಇಮ್ರಾನ್ ಬೇಗ್, ಮಾಳೂರು ಸಿಪಿಐ ರಾಜಶೇಖರ್.ಎಲ್, ಆಗುಂಬೆ ಪೊಲೀಸ್ ಠಾಣೆಯ ಪಿಎಸ್ಐ ಶಿವನಗೌಡ, ಮಾಳೂರು ಪಿಐಎಸ್ ಸುನಿಲ್ ಸಿಬ್ಬಂದಿಗಳಾದ ಲಿಂಗೇಗೌಡ, ಸುರಕ್ಷೀತ್, ಕಿರಣ್ ಕುಮಾರ, ಕುಮಾರ್, ಜೋಸೆಫ್ ಮ್ಯಾಥ್ಯೂ, ಸುರೇಶ್ ನಾಯ್ಕ, ಜಯಕುಮಾರ್, ರಮೇಶ ಅಕ್ಕಸಾಲಿ, ವಿನಯ್ ಕುಮಾರ್,ಉಲ್ಲಾಸ್ ನಾಯ್ಕ, ಪ್ರಶಾಂತ.ಓ, ಅನಿಲ್, ನಾಗಾರ್ಜುನ್, ವಿಶ್ವನಾಥ, ಸುನಿಲ್, ರವಿ.ಹೆಚ್.ಸಿ, ಅರವಿಂದ, ಅವಿನಾಶ, ಗುರುರಾಜ್, ಇಂದ್ರೇಶ ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ.