ಪ್ರಗತಿಯ ಹಾದಿಯಲ್ಲಿ ಬಸವಾನಿ ಸರ್ಕಾರಿ ಶಾಲೆ
ಶಾಲೆಯಿಂದ ಊರು ಬೆಳೆಯಲು ಸಾಧ್ಯ
ಹಳ್ಳಿ ಶಿಕ್ಷಣದ ಮಹತ್ವ ಪ್ರಚಾರವಾಗಲಿ
ಸಮೂದಾಯ ಪಾಲ್ಗೊಳ್ಳುವಿಕೆ ಶಾಲೆಯ ಅಭಿವೃದ್ದಿ - ಸಾಲೇಕೊಪ್ಪ ರಾಮಚಂದ್ರ
ನೆಲದ ಧ್ವನಿ
ಶಾಲೆಯ ಅಭಿವೃದ್ದಿಗೆ ಹಳೆ ವಿದ್ಯಾರ್ಥಿಗಳು, ಗ್ರಾಮಸ್ಥರು, ಸಂಘ ಸಂಸ್ಥೆ ನೆರವು ಅಗತ್ಯ. ಸಮೂದಾಯ ಪಾಲ್ಗೊಳ್ಳುವಿಕೆಯಿಂದ ಸರ್ಕಾರಿ ಶಾಲೆ ಉಳಿಸಲು ಸಾಧ್ಯ. ಹಳ್ಳಿಯ ಶಿಕ್ಷಣದ ಮಹತ್ವ ಪ್ರತಿಯೊಬ್ಬರಿಗೂ ಅರ್ಥವಾಗಬೇಕು ಎಂದು ತಾ.ಪಂ. ಮಾಜಿ ಅಧ್ಯಕ್ಷ ಸಾಲೇಕೊಪ್ಪ ರಾಮಚಂದ್ರ ಹೇಳಿದರು.
ಮಂಗಳವಾರ ತಾಲ್ಲೂಕಿನ ಬಸವನಗದ್ದೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ದಾನಿಗಳ ನೆರವಿನ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.
ಶಾಲೆ ಬೆಳೆದರೆ ಊರು ಬೆಳೆಯಲು ಸಾಧ್ಯ. ಶಾಲೆಗೆ ಸರ್ಕಾರದಿಂದ 50 ಸಾವಿರ ಮೊತ್ತ ಪಿಠೋಪಕರಣ ನೀಡಲಾಗಿದೆ. ಸರ್ಕಾರಿ ಶಾಲೆ ಅಭಿವೃದ್ಧಿಗೆ ದಾನಿಗಳು ನೀಡುತ್ತಿರುವ ಸಹಕಾರ ಸ್ಮರಣೀಯ ಎಂದರು.
ದಾನಿಗಳಾದ ಕನಕರಾಜ್, ಬೆಂಗಳೂರು ಗೆಳೆಯರ ಬಳಗದ ಲಯನ್ಸ್ ರಾಜಶೇಖರ, ತಾಲ್ಲೂಕು ಲಯನ್ಸ್ ಕ್ಲಬ್ ಅಧ್ಯಕ್ಷ ಸಿರಿಬೈಲು ಧರ್ಮೇಶ್, ಶಿಕ್ಷಣ ಸಂಯೋಜಕಿ ಜ್ಯೋತಿ ಮಾತನಾಡಿದರು. ಶಾಲೆಗೆ ಆಟದ ಸಾಮಾಗ್ರಿ, ನೋಟ್ ಬುಕ್, ಲೇಖನಿ ಸಾಮಾಗ್ರಿಗಳನ್ನು ದಾನಿಗಳು ನೀಡಿದರು. ದಾನಿಗಳಾದ ಕನಕರಾಜ್, ಸುಮಿತ್ರ ದಂಪತಿಯನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಹಣಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋಧ, ಸದಸ್ಯೆ ಸರೋಜ, ಶಾಲಾ ಎಸ್ಡಿಎಎಂಸಿ ಅಧ್ಯಕ್ಷ ಕೆ.ಬಿ. ಚಂದ್ರು, ಲಯನ್ಸ್ ಕ್ಲಬ್ ಕಾರ್ಯದರ್ಶಿ ಶ್ರೀನಾಥ್ ಜೋಯ್ಸ್, ಪ್ರಮುಖರಾದ ಕನ್ನಂಗಿ ಶೇಷಾದ್ರಿಗೌಡ, ಗಿರಿಧರ್, ತಿಮ್ಮೇಗೌಡ, ಮಂಜುನಾಥ್, ಮುಖ್ಯ ಶಿಕ್ಷಕಿ ಅನಿತಾ, ಶಿಕ್ಷಕ ಹೂವಪ್ಪ ಮತ್ತಿತರರು ಇದ್ದರು.