ತ್ರಿವರ್ಣ ಧ್ವಜ ಮೀರಿದ ಚಿಂತನೆ ಬೆಳೆಯಬೇಕು
ಚಿಂದಿ ದಾರ, ಮಹಿಳೆಯರ ಆಕ್ರಂದನದ ವಿರಾವೇಶ ನನ್ನ ಧ್ವಜ
ಸಂವಿಧಾನ ಅವಮಾನಿಸುವ ಕೃತ್ಯಕ್ಕೆ ಭಾರತ ಸಾಕ್ಷಿ
ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಸಾಹಿತಿ ಶಿವಾನಂದ ಕರ್ಕಿ ಅವರ ಗರ್ಕು ಕಾದಂಬರಿ ಶನಿವಾರ ಅನಾವರಣಗೊಂಡಿತು. |
ಕಾದಂಬರಿಯ ರೂಪಕ ಗರ್ಕು (ಕಾಡ್ಗಿಚ್ಚು) ಆರಿಸುವ ಮೂಲಕ ಅತಿಥಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. |
ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ. ಮೊಗಳ್ಳಿ ಗಣೇಶ್, ಕಾಡ್ಗಿಚ್ಚು ಕುರಿತು ಬಯಲು ಸೀಮೆಯವರಿಗೆ ಗೊತ್ತಿರುವುದಿಲ್ಲ. ಗರ್ಕಿನಿಂದ ಕಾಡು ಸುಡುವುದನ್ನು ರೂಪಕವಾಗಿ ಬಳಸಲಾಗಿದ್ದು, ಸಮಾಜಕ್ಕೆ ಹಿಡಿದ ಅಂತರಾಳದ ಕಿಚ್ಚನ್ನು ಆರಿಸುವ ಬಗೆಯನ್ನು ಕೃತಿ ವಿವರಿಸಿದೆ. ತ್ರಿವರ್ಣ ಧ್ವಜದಲ್ಲಿ ದಮನಿತರ, ರೈತರ, ಶೋಷಿತರ, ಬೆವರು, ಶ್ರಮದ ದೇಶಪ್ರೇಮದ ನೂಲುಗಳು ಅಡಕವಾಗಿದೆ. ಭಗವಾಧ್ವಜ ಆ ಅರ್ಥ ನೀಡುವುದಿಲ್ಲ. ನೀಲಿ ಬಣ್ಣದ ಅಶೋಕ ಚಕ್ರ ಸಂಚಲನವನ್ನು ಮೂಡಿಸುವಂತೆ ಹರಿವ ನೀರಿನಂತೆ ಆಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಿಂತ ನೀರಿನ ಕೊಚ್ಚೆಯಲ್ಲಿ ಕ್ರಿಯಾಶೀಲತೆ ಅರಳುವುದಿಲ್ಲ. ಹರಿವ
ನದಿ ಸುತ್ತಲಿನ ಪರಿಸರ, ಕಾಡು, ಜನಜೀವನ, ಅಭಿವೃದ್ದಿ ಎಲ್ಲವನ್ನು ಸೂಕ್ಷ್ಮ ಸಂವೇದನೆಯಿಂದ ಅರಿತುಕೊಳ್ಳುವ
ಆಲೋಚನೆ ಹೊಂದುತ್ತದೆ. ಹೀಗಾಗಿ ಸಾವಿರಾರು ಜೀವರಾಶಿಗೆ ಸತ್ವಪೂರ್ಣ ಆಹಾರ ಒದಗಿಸುವ ಚಲನಶೀಲತೆ ಪಡೆದಿದೆ.
ಅದೇ ರೀತಿ ಸಾಹಿತಿ ಕೂಡ ಒಂದು ಚೌಕಟ್ಟಿಗೆ ಒಳಗಾಗದೆ ಸಮಾಜದ ಅಂಕು-ಡೊಂಕುಗಳಿಗೆ ಉತ್ತರದಾಯಿತ್ವವಾಗಿ
ಯೋಚಿಸುವಂತಾಗಬೇಕು.
ಗೃಹಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಶಿವಾನಂದ ಕರ್ಕಿ ಆರೋಗ್ಯದ
ಸಮಸ್ಯೆಗಳ ನಡುವೆಯೂ ಕಾದಂಬರಿಯನ್ನು ಬರೆದು ಮುಗಿಸಿರುವುದು ಶ್ಲಾಘನೀಯ. ಹೇಳಬೇಕು ಎಂದೆನಿಸಿದ ವಿಚಾರಗಳನ್ನು
ನೇರವಾಗಿ ಅಕ್ಷರಕ್ಕೆ ಇಳಿಸಿದ್ದಾರೆ. ಮಲೆನಾಡಿನ ಪರಿಸರದ ಒಳಗೆ ಆಗುವ ಬದಲಾವಣೆಯನ್ನು ತಡೆಯುವ ಪ್ರಯತ್ನದಲ್ಲಿ
ಲೇಖಕ ವಿಫಲವಾಗುವ ಸಂದರ್ಭ. ಬದಲಾವಣೆಯ ನಂತರ ಆಗುವ ಸಾಮಾಜಿಕ ಬದಲಾವಣೆ ತಿಳಿಸಿದ್ದಾರೆ. ನಾನು ಕೂಡ
ತಡೆಯುವ ಪ್ರಯತ್ನ ಮಾಡಿ ತೊಂದರೆಗೆ ಒಳಗಾದ ಸಂದರ್ಭ ಇದೆ ಎಂದು ಹೇಳಿದರು.
ಹಿರಿಯ ಸಾಹಿತಿ, ನಿವೃತ್ತ ಪ್ರಾಧ್ಯಾಪಕ ಡಾ.ಜೆ.ಕೆ. ರಮೇಶ್ ಮಾತನಾಡಿ,
ಕೃತಿ ಜಾಗತಿಕ ಮಟ್ಟದ ಆಶಯವನ್ನು ತನ್ನೊಳಗೆ ಹುದುಗಿಸಿಕೊಂಡಿದೆ. ಅಮೇಜಾನ್ ಕಾಡಿಗೆ ಬೆಂಕಿ ಬಿದ್ದಾಗಿನ
ಸ್ಥಿತಿ, ಇನ್ನೆಲ್ಲೋ ಒಳಗಾಗುವ ಆಂತರಿಕ ಕಿಚ್ಚು ಕಾದಂಬರಿಯ ಒಳಗಿನ ಘನತೆಯನ್ನು ಹೆಚ್ಚಿಸಿದೆ. ಭಾರತದಂತಹ
ಪ್ರಜಾಪ್ರಭುತ್ವ ಹೊಂದಿರುವ ದೇಶದಲ್ಲಿ ಧರ್ಮ ಹೆಸರಿನಲ್ಲಿ ಆಗುತ್ತಿರುವ ದೊಂಬಿ ಸಮಾಜ ಕೆಡಿಸುವಂತಾಗಿದೆ.
ಮನುಷ್ಯ ಜಗತ್ತಿನ ಅಭಿವೃದ್ಧಿಯ ದಳ್ಳೂರಿ ದೇಶದ ವಿನಾಶವನ್ನು ಸೂಚಿಸುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ, ವಿಮರ್ಶಕ ಡಾ.ಜೆ.ಕೆ.
ರಮೇಶ್, ಗೃಹಸಚಿವ ಆರಗ ಜ್ಞಾನೇಂದ್ರ, ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಡಾ. ಆರ್.ಎಂ. ಮಂಜುನಾಥ
ಗೌಡ, ಲೇಖಕ ಶಿವಾನಂದ ಕರ್ಕಿ ಮಾತನಾಡಿದರು.
ಮೋಹನ್ ಮುನ್ನೂರು ಆರಂಭ ಗೀತೆ ಹಾಡಿದರು. ನೆಂಪೆ ದೇವರಾಜ್ ಸ್ವಾಗತಿಸಿದರು.
ಡಾ.ಬಿ.ಗಣಪತಿ ನಿರೂಪಿಸಿದರು.