ವಿದ್ಯಾರ್ಥಿಗಳಿಗೆ ನಡೆಗೆ ಬಿಟ್ಟರೆ ಬೇರಿಲ್ಲ ಮಾರ್ಗ: ಕುರುವಳ್ಳಿ ನಾಗರಾಜ್

ಶಾಲಾ ವಿದ್ಯಾರ್ಥಿಗಳಿಗೆ ಬಸ್‌ ಸೌಕರ್ಯಕ್ಕೆ ಬೇಡಿಕೆ

ಜಯಕರ್ನಾಟಕ ಸಂಘಟನೆಯಿಂದ ತಹಶೀಲ್ದಾರ್‌ಗೆ ಮನವಿ

ನಿತ್ಯ ಸಂಚಾರಕ್ಕೆ ಅಡ್ಡಿ…

ವಿದ್ಯಾರ್ಥಿಗಳಿಗೆ ನಡೆಗೆ ಬಿಟ್ಟರೆ ಬೇರಿಲ್ಲ ಮಾರ್ಗ

ತೀರ್ಥಹಳ್ಳಿ ತಾಲ್ಲೂಕು ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಕುರುವಳ್ಳಿ ನಾಗರಾಜ್‌ ನೇತೃತ್ವದಲ್ಲಿ ತಹಶೀಲ್ದಾರ್‌ ಡಾ.ಎಸ್.ಬಿ. ಶ್ರೀಪಾದ ಅವರಿಗೆ ಮನವಿ ಸಲ್ಲಿಸಲಾಗಿದೆ.

ಮೇಳಿಗೆ, ಕಟ್ಟೇಹಕ್ಕಲು, ಹೆದ್ದೂರು, ಮೃಗಾವಧೆ, ಹುಣಸವಳ್ಳಿ, ಹರಳೀಮಠ, ಕೊಂಡ್ಲೂರು, ಟೆಂಕಬೈಲು, ಕನ್ನಂಗಿ, ಗರಗ, ನಗರ ಮಾರ್ಗ, ಮಳಲೀಮಕ್ಕಿ, ಬುಕ್ಕಿವರೆ, ದೇಮ್ಲಾಪುರ, ಕೆಂದಾಳಬೈಲು, ಗುಡೇಕೇರಿ, ಯಡೂರು, ಮಾಸ್ತಿಕಟ್ಟೆ, ತೀರ್ಥಮುತ್ತೂರು ಸೇರಿದಂತೆ ಬಹುತೇಕ ಭಾಗದ ವಿದ್ಯಾರ್ಥಿಗಳು ಪರದಾಡಬೇಕು. ಹಿಂದೆ ಇದ್ದ ಸಹಕಾರಿ ಸಾರಿಗೆ ಬಸ್‌ ಸಂಚಾರ ನಿಲ್ಲಿಸಿದ್ದರ ಪರಿಣಾಮ ಆ ಮಾರ್ಗದಲ್ಲಿ ಇನ್ನೂ ಕೂಡ ಬಸ್‌ ಸಂಚಾರ ಮೊದಲಿನಂತೆ ಆರಂಭವಾಗಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು, ಗ್ರಾಮೀಣ ಜನತೆ ಸಂಕಷ್ಟಕ್ಕೆ ತಲುಪಿದ್ದಾರೆ. ತಕ್ಷಣ ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆ ಕಲ್ಪಿಸುವಂತೆ ಕುರುವಳ್ಳಿ ನಾಗರಾಜ್‌ ಮನವಿ ಮಾಡಿಕೊಂಡಿದ್ದಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post