ಸಾಧನೆ
ಗೈದ ವಿದ್ಯಾರ್ಥಿಗಳಿಗೆ ಅಭಿನಂದನೆ
ಶಿಕ್ಷಣ
ಇಲಾಖೆಯಿಂದ ಗೌರವ ಸಮರ್ಪಣೆ
ಬಿಇಓ
ಆನಂದಕುಮಾರ್ರಿಂದ ಸನ್ಮಾನ ಶುರು
ಎಸ್ಎಸ್ಎಲ್ಸಿ
ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಮೂಲಕ ಪ್ರೇರಣೆ
ನೀಡುವ ಕಾರ್ಯವನ್ನು ಕ್ಷೇತ್ರ ಶಿಕ್ಷಣ ಇಲಾಖೆ ಆರಂಭಿಸಿದೆ. ಜಿಲ್ಲೆಯಲ್ಲೂ ಸತತ 3ನೇ ವರ್ಷ
ಪರೀಕ್ಷೆ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆಯಲು ಕಾರಣವಾಗಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ
ಇಲಾಖೆ ಅಭಿನಂದನೆ ಸಲ್ಲಿಸಿದೆ.
ಸೋಮವಾರ
ಬಿಇಓ ಆನಂದಕುಮಾರ್ ತೀರ್ಥಹಳ್ಳಿಯ ವಾಗ್ದೇವಿ ಆಂಗ್ಲ ಮಾಧ್ಯಮ ಶಾಲೆಗೆ ಭೇಟಿ ನೀಡಿ 625ಕ್ಕೆ 625 ಅಂಕ
ಪಡೆದ ಸೃಷ್ಟಿ ಜೆ, 624 ಅಂಕ ಪಡೆದ ಮಹಮದ್ ನಿಹಾಲ್ ಷರೀಪ್, 623 ಅಂಕ ಪಡೆದ ತನ್ಮಯಿ ಡಿ.ಸಿ,
ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸತ್ಪಥ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಜಗದೀಶ್ ಕೊಡಸಗೊಳ್ಳಿ,
ಶಿಕ್ಷಕರು, ಪೋಷಕರು ಪಾಲ್ಗೊಂಡಿದ್ದರು.
