ಶ್ರೀ ಮಾರಿಕಾಂಬ ದೇವಸ್ಥಾನದಲ್ಲಿ ಕರಗ ಉತ್ಸವ

ತ್ರಿಶೂಲ ಶಕ್ತಿ ರೂಪದ ಕರಗ
ತೀರ್ಥಹಳ್ಳಿ ಪಟ್ಟಣ ಸಮೀಪದ ಮೇಲಿನ ಕುರುವಳ್ಳಿ ಮಾರಿಕಾಂಬ ದೇವಸ್ಥಾನದ 49ನೇ ವರ್ಷದ ಕರಗ ಉತ್ಸವಕ್ಕೆ ಸೋಮವಾರ ಚಾಲನೆ ದೊರೆಯಿತು. ಭಕ್ತರು ಮುಂಜಾನೆ ತುಂಗಾ ನದಿಯಿಂದ ತುಂಗಾತೀರ್ಥವನ್ನು ದೇವಿಗೆ ಅರ್ಪಿಸಿದರು.

ತುಂಗಾತೀರ್ಥ ಶ್ರೀ ದೇವಿಗೆ ಅರ್ಪಿಸಲಾಯಿತು.
ಸಂಜೆ ತುಂಗಾ ನದಿಯಲ್ಲಿ ವಿಶೇಷವಾಗಿ ಶಕ್ತಿಯ ಸಂಕೇತವಾಗಿ ತ್ರಿಶೂಲ ರೂಪದ ಕರಗವನ್ನು ಜೋಡಣೆ, ಜಾನಪದ ಪಂಬೆ ವಾದನದೊಂದಿಗೆ ಕರಗ ಉತ್ಸವ ಕುರುವಳ್ಳಿಯಿಂದ ಮೇಲಿನಕುರುವಳ್ಳಿಯ ವರಗೆ ನಡೆಯಿತು. ಡಿಜೆ ಉತ್ಸವಕ್ಕೆ ಹೆಚ್ಚಿನ ಮೆರುಗು ನೀಡಿತು. ಹಾಗೂ ಶ್ರೀ ಕ್ಷೇತ್ರ ಅಲಸೆ ಮೇಳದ ಯಕ್ಷಗಾನ ಕಲಾವಿದರಿಂದ ಭಸ್ಮಾಸುರ ಮೋಹಿನಿ – ಜಾಂಬವತಿ ಕಲ್ಯಾಣ ಕಥಾಭಾಗ ಪ್ರದರ್ಶನಗೊಂಡಿತು.

ಚಂಡಿಕಾ ಹವನ
ಮಂಗಳವಾರ ದೇವಸ್ಥಾನದ ಆವರಣದಲ್ಲಿ ಚಂಡಿಕಾ ಹವನ, ಪೂರ್ಣಾಹುತಿ ನಡೆದಿದ್ದು, ಸಂಜೆ ತಂಬಿಟ್ಟು ದೀಪ ಸೇವೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಬುಧವಾರ ಸಂಜೆ 6ಕ್ಕೆ ಕರಗ ಮೆರವಣಿಗೆ ನಂತರ ವಿಸರ್ಜನೆಗೊಳ್ಳಲಿದೆ. 3 ದಿನಗಳ ಕರಗ ಉತ್ಸವದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ದೇವಸ್ಥಾನ ಆಡಳಿತ ಮಂಡಳಿ ಕೋರಿದ್ದಾರೆ.

ಕೊರೋನ ಅವಧಿಯಲ್ಲಿ ಸರಳವಾಗಿ ಕರಗ ಆಚರಣೆ ಮಾಡಲಾಗಿತ್ತು. ಪ್ರಸ್ತುತ ವರ್ಷ ಕೊರೋನಾ ಬಿಡುವು ನೀಡಿದ ಹಿನ್ನಲೆಯಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ.



ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post