ನಾನು ಮಾಡಿಸಿದ ರಸ್ತೆಯಲ್ಲಿ ವಾಕಿಂಗ್...
ಕಿಮ್ಮನೆ ಪಾದಯಾತ್ರೆಗೆ ಆರಗ ಲೇವಡಿ
ಯಾವುದೇ ವಿಷಯಗಳು ಇಲ್ಲದಿದ್ದಾಗ ಕಿಮ್ಮನೆ ಆಗಾಗ ಪಾದಯಾತ್ರೆ ಮಾಡುತ್ತಾರೆ. ನಾನು ಇದ್ದೀನಿ ಅಂತಾ ಗೊತ್ತು ಮಾಡುವ ಪ್ರಯತ್ನ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಪಾದಯಾತ್ರೆಗೆ ಬೇಕಾದ ಸರಿಯಾದ ರಸ್ತೆ ಮಾಡಿಸಿದ್ದೇನೆ ಎಂದು ಕಾಲೆಳೆದಿದ್ದಾರೆ.
ಅವರ ಅವಧಿಯ 10 ವರ್ಷದಲ್ಲಿ ಅಭಿವೃದ್ಧಿ ಕೆಲಸ ಸತ್ತು ಹೋಗಿತ್ತು. ಅದನ್ನು ನಾನು ಮಾಡಿಸುತ್ತಿದ್ದೇನೆ. ಪಾದಯಾತ್ರೆ ಮಾಡೋದು ಅವರ ನಿತ್ಯದ ಕರ್ಮವಾಗಿದೆ ಎಂದು ಶಿವಮೊಗ್ಗದಲ್ಲಿ ತಿರುಗೇಟು ನೀಡಿದ್ದಾರೆ.
ಯತ್ನಾಳ್ ಹೇಳಿಕೆ ವಿಚಾರ ನಮ್ಮ ಹಿರಿಯರು ಗಮನಿಸುತ್ತಿದ್ದಾರೆ. ಯತ್ನಾಳ್ ಅವರು ನನ್ನ ಸ್ನೇಹಿತರು. ಅವರು ಈ ಹಿಂದೆ ಬಹಳ ಸ್ಟೇಟ್ ಮೆಂಟ್ ಕೊಟ್ಟಿದ್ದಾರೆ. ಹೀಗಾಗಿ ಅವರ ಹೇಳಿಕೆಗಳ ಬಗ್ಗೆ ತೀರಾ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
Tags:
ಪಾದಯಾತ್ರೆ