ವಾಲಿಬಾಲ್ ಪಂದ್ಯದಲ್ಲಿ ಅಡಕೆ ಮಾತು
ರೇಟು ಹೇಳಿ ಸಂಭ್ರಮಿಸಿದ ಗೃಹಸಚಿವ ಆರಗ ಜ್ಞಾನೇಂದ್ರ
ಮಲೆನಾಡು ವಾಲಿಬಾಲ್ ಒಕ್ಕೂಟದ ಆಶ್ರಯದಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಕುಡುಮಲ್ಲಿಗೆಯಲ್ಲಿ ಮಲೆನಾಡು ಲೀಗ್-5 ವಾಲಿಬಾಲ್ ಪಂದ್ಯಾವಳಿಯನ್ನು ಹಿರಿಯ ವಾಲಿಬಾಲ್ ಆಟಗಾರ ಬಸವಾನಿ ಕವಿರಾಜ್ ಉದ್ಘಾಟಿಸಿದರು. ಬೆಂಗಳೂರಿನಲ್ಲಿ 4 ಲೀಗ್ ಪಂದ್ಯ ಮುಗಿಸಿದೆ. ಕ್ರೀಡಾಕೂಟದಲ್ಲಿ 10 ತಂಡಗಳು ಭಾಗವಹಿಸಿದ್ದವು. ಮುಖ್ಯ ಅತಿಥಿಯಾಗಿ ಗೃಹಸಚಿವ ಆರಗ ಜ್ಞಾನೇಂದ್ರ ಮಾತನಾಡಿದರು.
“ಮಲೆನಾಡಿನ ಜೀವನದಲ್ಲಿ ಹಾಸು ಹೊಕ್ಕಾಗಿರುವ ಅಡಿಕೆಗೆ ಉತ್ತಮ ಧಾರಣೆ ನೀಡುವ ಉದ್ದೇಶದಿಂದ ನಿರಂತರ ಪ್ರಯತ್ನಿಸಿದ್ದೇನೆ. ಅಡಿಕೆ ಬೆಳೆಯುವ ನಮ್ಮೂರಿನ ರೈತರ ಸಂತೋಷದಿಂದ ಕಾಲ ಕಳೆಯುವಂತಾಗಬೇಕು. ಉತ್ತಮ ದರ ನಿಗದಿಯಾಗಿದ್ದರಿಂದ ಹಳ್ಳಿಯಲ್ಲೇ ರಾಜ್ಯ ಮಟ್ಟದ ಕ್ರೀಡಾಕೂಟ ಏರ್ಪಡಿಸಲಾಗಿದೆ. ಕ್ರೀಡೆಗೂ ಪ್ರೋತ್ಸಾಹ ಸಿಗುತ್ತಿದೆ ಎಂಬ ಸಂತೋಷ ನನಗೆ. ಅಡಿಕೆ ರೇಟು ಕ್ರೀಡಾ ಚಟುವಟಿಕೆಗೆ ಪೂರಕ” ಎಂದು ಸಂಭ್ರಮಿಸಿದ್ರು.
ಕಾರ್ಯಕ್ರಮದಲ್ಲಿ ಸಾಲೆಕೊಪ್ಪ ರಾಮಚಂದ್ರ, ಬೇಗುವಳ್ಳಿ ಸತೀಶ್, ಗೀತಾ ಶೆಟ್ಟಿ ಮುಂತಾದವರು ಭಾಗವಹಿಸಿದ್ದರು.