ಗರ್ಕು ಕಾದಂಬರಿ ಬಿಡುಗಡೆಗೆ ಸಜ್ಜು
ಶಿವಾನಂದ ಕರ್ಕಿ ಎರಡನೇ ಪುಸ್ತಕ
ಮೇ 28ರಂದು ಬಿಡುಗಡೆ
ಅಕೇಶೀಯಾ ನೆಡುತೋಪು ಕುರಿತ ನೈಜ ಚಿತ್ರಣ
ಕನ್ನಡ
ವಿಶ್ವವಿದ್ಯಾಲಯ ಹಂಪಿಯ ಪ್ರಾಧ್ಯಾಪಕ ಡಾ.ಮೊಗೊಳ್ಳಿ ಗಣೇಶ್ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ನಿವೃತ್ತ ಪ್ರಾಧ್ಯಾಪಕ, ಹಿರಿಯ ಸಾಹಿತಿ ಡಾ.ಜೆ.ಕೆ.ರಮೇಶ್
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ, ರಾಜ್ಯ ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಡಾ.ಆರ್.ಎಂ. ಮಂಜುನಾಥ
ಗೌಡ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ವಕೀಲ, ಸಂಸ್ಕೃತಿ ಚಿಂತಕ ಕೊಪ್ಪದ ಸುಧೀರ್ ಕುಮಾರ್ ಮುರೊಳ್ಳಿ ಪುಸ್ತಕದ ಕುರಿತು ಮಾತನಾಡಲಿದ್ದಾರೆ.
ಕಾರ್ಯಕ್ರಮವು ಶಿವಾನಂದ್ ಕರ್ಕಿ ಅವರ ಉಪಸ್ಥಿತಿಯಲ್ಲಿ
ನಡೆಯಲಿದ್ದು, ನಿವೃತ್ತ ಪ್ರಾಂಶುಪಾಲ ಡಾ.ಬಿ.ಗಣಪತಿ ಉತ್ತುಂಗ,
ಚಿಂತಕ ನೆಂಪೆ ದೇವರಾಜ್ ಕಾರ್ಯಕ್ರಮದ ನಿರ್ವಹಣೆ ಮಾಡಲಿದ್ದಾರೆ.
ಒಂದು ಕಾಲದಲ್ಲಿ
ಮುಳುಗಡೆಯಾದ ಸಹಜ ಅರಣ್ಯಗಳಿಗೆ ಪರಿಯಾಯ ಎಂಬಂತೆ ಸರ್ಕಾರ, ಅರಣ್ಯ ಅಧಿಕಾರಿಗಳಿಂದ ಪ್ರಚಾರ
ಪಡೆದಿದ್ದ ಅಕೇಶಿಯಾ ನೆಡುತೋಪು ಕಾಲ ಕ್ರಮೇಣ ಮಲೆನಾಡಿನ ಪರಿಸರ ವೈವಿಧ್ಯತೆಗೆ ಮಾರಕವಾಗುವುದು
ಮತ್ತು ಅದು ಗ್ರಾಮೀಣ ಜನಜೀನದ ಪರಿಸರದ ಮೇಲೆ ಉಂಟು ಮಾಡುವ ಪರಿಣಾಮ ಈ ಕಾದಂಬರಿಯ ಕೇಂದ್ರ ಬಿಂದು.

