ಉಪಜಾತಿ ಪ್ರಚೋಧಿತ ಹಿಂದೂ ಧರ್ಮಕ್ಕೆ ಬೆಲೆ ಇಲ್ಲ
ವ್ಯಕ್ತಿ ಕೊಲೆಗಿಂತ ಮನಸ್ಸಿನ ಕಗ್ಗೊಲೆ ಅಪಾಯಕಾರಿ ಕಿಮ್ಮನೆ ರತ್ನಾಕರ್
ತೀರ್ಥಹಳ್ಳಿ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿದರು. |
ತೀರ್ಥಹಳ್ಳಿ: ಬಿಜೆಪಿ ಮುಖಂಡರು ಉಪ ಜಾತಿಗಳ ಮಾನ್ಯತೆಯ ಹಕ್ಕಿಗಾಗಿ ಬೇಡಿಕೆ ನೀಡುತ್ತಿರುವ ಸಂದರ್ಭದಲ್ಲಿ ಹಿಂದೂ ಒಂದು ಎಂಬ ಧಾರ್ಮಿಕ ಪ್ರಚೋದನೆಗೆ ಬೆಲೆ ಇಲ್ಲ. ಮಹಾತ್ಮ ಗಾಂಧಿ ಒಕ್ಕೂಟ ಭಾರತ ನೀಡಿದ್ದರು. ಇದೇ ರೀತಿ ಧರ್ಮದ ಅಮುಲು ಹೆಚ್ಚಾದರೆ ಭಾರತ 20 ಛಿದ್ರವಾಗಲಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಎಚ್ಚರಿಸಿದರು.
ಶುಕ್ರವಾರ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ
ಅವರು ಮಾತನಾಡಿ, “ಪುಟಿನ್ ಉಕ್ರೇನ್ ಮೇಲೆ ದಾಳಿ ನಡೆಸಿದ್ರೆ, ಮೋದಿ ಜನರ ಮನಸ್ಸನ್ನು
ಧರ್ಮದ ಹೆಸರಿನಲ್ಲಿ ಕಲುಷಿತ ಮಾಡುತ್ತಿದ್ದಾರೆ. ಮೋದಿಗೂ ಪುಟಿನ್ ಗೂ ಯಾವುದೇ ವ್ಯತ್ಯಾಸ ಇಲ್ಲ” ಎಂದರು.
ಜನೋಪಯೋಗಿ ಯೋಜನೆ ಜಾರಿ ಮಾಡದೆ ಧರ್ಮದ ಆಧಾರದ ಮೇಲೆ 8 ವರ್ಷಗಳು ಕೇಂದ್ರದ
ಆಡಳಿತ ಇದೆ. ಬೆಲೆ ಏರಿಕೆ, ಬಡತನ, ನಿರುದ್ಯೋಗದಿಂದ ಜನಸಾಮಾನ್ಯರು ಬಳಲುತ್ತಿದ್ದಾರೆ. ಇದರ ನಡುವೆ
ಆರ್ಟಿಕಲ್ 370, ತ್ರಿವಳಿ ತಲಾಕ್, ಗೋವು ಸಂರಕ್ಷಣೆ, ಬಾಬರಿ ಮಸೀದಿ, ಈದ್ಗಾ ಮೈದಾನ, ದತ್ತಪೀಠ,
ಹಿಜಾಬ್ ಎಲ್ಲ ಕಾಯ್ದೆ ಧರ್ಮದ ಪ್ರಚೋದನೆಗೆ ಬಳಸಲಾಗಿದೆ ಎಂದು ದೂರಿದರು.
ಬಿಜೆಪಿ ನಾಯಕರು ದೃಶ್ಯ ಮಾಧ್ಯಮ ನಡೆಸುತ್ತಿದ್ದಾರೆ. ಹಾಗಾಗಿ ಸುದ್ದಿಗಳು
ಪಕ್ಷ ಕೇಂದ್ರಿತ ಪ್ರಸರಣದಲ್ಲಿ ತೊಡಗಿವೆ. ಕಾಂಗ್ರೆಸ್ ಪಕ್ಷದಲ್ಲಿ ಒಬ್ಬ ತಪ್ಪು ಮಾಡಿದರೆ 50 ಜನ
ಅದರ ವಿರುದ್ಧ ನಿಲ್ಲುತ್ತಾರೆ. ಬಿಜೆಪಿ ಪಕ್ಷದಲ್ಲಿ ತದ್ವಿರುದ್ದ ಕಲ್ಪನೆ ಬೆಳೆಸಲಾಗಿದೆ. ಆಂತರಿಕ
ಸ್ವಾತಂತ್ರ್ಯ ಕಳೆದುಕೊಂಡವರು ಬಿಜೆಪಿಯೊಳಗೆ ಬದುಕುತ್ತಾರೆ ಎಂದು ಕಿಮ್ಮನೆ ಟೀಕಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಕೆಪಿಸಿಸಿ ಸದಸ್ಯ ಜಿ.ಎಸ್. ನಾರಾಯಣ ರಾವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರು ಮಂಜುನಾಥ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಬನಮ್, ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ಮುಂಖಡರಾದ ಬೇಡನಬೈಲು ಯಲ್ಲಪ್ಪ, ವಿಲಿಯಂ ಮಾರ್ಟೀಸ್, ಮಂಜುನಾಥ್ ಇದ್ದರು.
ಚೆನ್ನಾಗಿದೆ
ReplyDeleteಮರಳಿ ಯತ್ನ ಶುಭ ಹಾರೈಕೆ ಇರಲಿ.
ReplyDelete