ವ್ಯಂಗ್ಯಚಿತ್ರಕಾರ ರಾಮಚಂದ್ರ ಕೊಪ್ಪಲುಗೆ
ಜಿಲ್ಲಾ ಗೌರವ
ಶಿಕಾರಿಪುರ ಕೆ.ಎಸ್.
ಹುಚ್ರಾಯಪ್ಪಗೆ ಗೌರವ
ಸುಮಾರು 3 ದಶಕಗಳ ಕಾಲದಿಂದ
ನಾಡಿನ ವಿವಿಧ ಪತ್ರಿಕೆ, ನಿಯತಕಾಲಿಕೆಗಳಲ್ಲಿ ವ್ಯಂಗ್ಯಚಿತ್ರಕಾರರಾಗಿ ಗುರುತಿಸಿಕೊಂಡಿರುವ
ಪತ್ರಕರ್ತ ರಾಮಚಂದ್ರ ಕೊಪ್ಪಲು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ ಜಿಲ್ಲಾ ಶಾಖೆಯ
ಗೌರವಕ್ಕೆ ಪಾತ್ರರಾಗಿದ್ದಾರೆ.
ಇವರ ಜೊತೆಗೆ ಶಿಕಾರಿಪುರದ ಕೆ.ಎಸ್.
ಹುಚ್ರಾಯಪ್ಪ, ಹೊಳೆಹೊನ್ನೂರು ಅರಹತೊಳಲು ಕೆ.ರಂಗನಾಥ್, ಸೊರಬದ ಶಿವಪ್ಪ ಹಿತ್ಲರ್, ಭದ್ರಾವತಿ
ಟಿ.ಎಸ್.ಆನಂದ ಕುಮಾರ್, ಸಾಗರದ ರಾಜೇಶ್ ಭಡ್ತಿ, ಹೊಸನಗರ ಪಿ.ಎನ್.ನರಸಿಂಹ ಮೂರ್ತಿ, ಟಿವಿ-9
ಛಾಯಚಿತ್ರಕಾರ ರಘುಕುಮಾರ್, ಜೈ ಕರುನಾಡು ಪತ್ರಿಕೆಯ ಸಂಪಾದಕ ನಾಗರಾಜ ಕಲ್ಕೊಪ್ಪ ಅವರುಗಳು
ಜಿಲ್ಲಾ ಪತ್ರಕರ್ತರ ಸಂಘದ ಗೌರವಕ್ಕೆ ಪಾತ್ರರಾಗಿದ್ದಾರೆ.
ಆಗಸ್ಟ್ 2ರ ಭಾನುವಾರ
ಬೆಳಿಗ್ಗೆ 10 ಗಂಟಗೆ ಪತ್ರಿಕಾ ಭವನದಲ್ಲಿ ನಡೆಯಲಿರುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ
ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ.
