ಧಾರಾವಾಹಿ ಸಂಭಾಷಣೆಗಾರ ಜಿ.ಟಿ.ನಂದೀಶ್ ಜಿ.ಟಿ. ನಿಧನ

ಧಾರಾವಾಹಿ ಸಂಭಾಷಣೆಗಾರ, ಚಲನಚಿತ್ರ ಕಥೆಗಾರ ತೀರ್ಥಹಳ್ಳಿಯ ಮಾಳೂರಿನ ನಂದೀಶ್ ಜಿ.ಟಿ. (37) ಹೃದಯಾಘಾತದಿಂದ ಬುಧವಾರ ನಿಧನರಾಗಿದ್ದಾರೆ.
ಚಿತ್ತಾರ ಸಂಸ್ಥೆಯ ಜೊತೆಗೆ ಕನ್ನಡದ ಹಲವಾರು ಧಾರವಾಹಿ, ಚಲನಚಿತ್ರಕ್ಕೆ ಸಾಕಷ್ಟು ನಟ, ನಟಿಯರನ್ನು ಪರಿಚಯಿಸುವ ಜೊತೆಗೆ ಕಥೆಗಳನ್ನು ಬರೆಯುವ ಮೂಲಕ ತಾರಾ ಬಳಗಕ್ಕೆ ಆಸ್ತಿಯಾಗಿದ್ದರು. ಮಾಳೂರಿನಿಂದಲೇ ಚಿತ್ರರಂಗಕ್ಕೆ ವಿಭಿನ್ನ ರೀತಿಯ ಕಥೆಯನ್ನು ನಂದಿಶ್ ಒದಗಿಸುತ್ತಿದ್ದರು. ಹೊಗೆಸೊಪ್ಪು ಗಂಗಾಧರಯ್ಯ ಎಂಬ ಹೆಸರಿನಿಂದ ಮಾಳೂರು ಭಾಗದಲ್ಲಿ ಅವರ ತಂದೆ ಪ್ರಸಿದ್ಧರಾಗಿದ್ದರು. ಅವರು ತಾಯಿ, ಪತ್ನಿ ಸೇರಿದಂತೆ ಇಬ್ಬರು ಪುಟಾಣಿ ಮಕ್ಕಳನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ 12.30 ಕ್ಕೆ ನಡೆಯಲಿದೆ.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post