ಧಾರಾವಾಹಿ ಸಂಭಾಷಣೆಗಾರ, ಚಲನಚಿತ್ರ ಕಥೆಗಾರ ತೀರ್ಥಹಳ್ಳಿಯ ಮಾಳೂರಿನ ನಂದೀಶ್ ಜಿ.ಟಿ. (37) ಹೃದಯಾಘಾತದಿಂದ ಬುಧವಾರ ನಿಧನರಾಗಿದ್ದಾರೆ.
ಚಿತ್ತಾರ ಸಂಸ್ಥೆಯ ಜೊತೆಗೆ ಕನ್ನಡದ ಹಲವಾರು ಧಾರವಾಹಿ, ಚಲನಚಿತ್ರಕ್ಕೆ ಸಾಕಷ್ಟು ನಟ, ನಟಿಯರನ್ನು ಪರಿಚಯಿಸುವ ಜೊತೆಗೆ ಕಥೆಗಳನ್ನು ಬರೆಯುವ ಮೂಲಕ ತಾರಾ ಬಳಗಕ್ಕೆ ಆಸ್ತಿಯಾಗಿದ್ದರು. ಮಾಳೂರಿನಿಂದಲೇ ಚಿತ್ರರಂಗಕ್ಕೆ ವಿಭಿನ್ನ ರೀತಿಯ ಕಥೆಯನ್ನು ನಂದಿಶ್ ಒದಗಿಸುತ್ತಿದ್ದರು. ಹೊಗೆಸೊಪ್ಪು ಗಂಗಾಧರಯ್ಯ ಎಂಬ ಹೆಸರಿನಿಂದ ಮಾಳೂರು ಭಾಗದಲ್ಲಿ ಅವರ ತಂದೆ ಪ್ರಸಿದ್ಧರಾಗಿದ್ದರು. ಅವರು ತಾಯಿ, ಪತ್ನಿ ಸೇರಿದಂತೆ ಇಬ್ಬರು ಪುಟಾಣಿ ಮಕ್ಕಳನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ 12.30 ಕ್ಕೆ ನಡೆಯಲಿದೆ.