ಬಹುತೇಕ ಕನ್ನಡಿಗರು ಸ್ಥಾಪಿಸಿದ ಬ್ಯಾಂಕುಗಳಲ್ಲಿ ಅತ್ಯುತ್ತಮ ವ್ಯವಹಾರದೊಂದಿಗೆ ಈಗಲೂ ಪ್ರತಿಷ್ಠೆ ಉಳಿಸಿಕೊಂಡಿರುವ ಕರ್ಣಾಟಕ ಬ್ಯಾಂಕ್ ಚೀಪ್ ಮ್ಯಾನೇಜರ್ ಆಗಿ ರಾಘವೇಂದ್ರ ಜೋಯ್ಸ್ ಬಡ್ತಿ ಹೊಂದಿದ್ದಾರೆ. ಮೂಲತಃ ಯಡೂರು ಜೋಯ್ಸ್ ಕುಟುಂಬದ ರಾಘವೇಂದ್ರ ತಮ್ಮ ಹೈಸ್ಕೂಲ್ ವಿದ್ಯಾಭ್ಯಾಸವನ್ನು ಡಾ.ಯು.ಆರ್.ಅನಂತಮೂರ್ತಿ ಪ್ರೌಢಶಾಲೆ ಹಾಗೂ ಪದವಿ ವ್ಯಾಸಂಗವನ್ನು ತುಂಗಾ ಕಾಲೇಜಿನಲ್ಲಿ ಪೂರೈಸಿದ್ದಾರೆ. ರಾಘವೇಂದ್ರ ಜೋಯ್ಸ್ ಉತ್ತಮ ಹವ್ಯಾಸಿ ಲೇಖಕನಾಗಿಯೂ ಗಮನ ಸೆಳೆದವರಾಗಿದ್ದಾರೆ.
