ಭಾರತ ಅಭಿವೃದ್ಧಿ ಹೊಂದಲು ಹಿರಿಯರ ತ್ಯಾಗ ಬಲಿದಾನ ಕಾರಣ
ತೀರ್ಥಹಳ್ಳಿಗೆ
ಗಾಂಧೀಜಿ ಭೇಟಿ ನೀಡಿ ಶತಮಾನ ತುಂಬುತ್ತಿರುವುದು ಐತಿಹಾಸಿಕ ಘಟನೆ. ಸತ್ಯ, ಅಹಿಂಸೆ, ಸತ್ಯಾಗ್ರಹದ
ಮೂಲಕ ಸ್ವಾತಂತ್ರ್ಯವನ್ನು ಹೇಗೆ ಪಡೆಯಬೇಕು ಎಂಬುದನ್ನು ಗಾಂಧೀಜಿ ಇಡಿ ವಿಶ್ವಕ್ಕೆ ತೋರಿಸಿಕೊಟ್ಟವರು.
ಭಾರತ ವಿಶ್ವದ ಎಲ್ಲಾ ಜನಪರ ಹೋರಾಟಗಳಿಗೆ ನೀಡಿದ ದೊಡ್ಡ ಕೊಡುಗೆ ಗಾಂಧೀಜಿ. ಅವರು 1927ನೇ ಇಸವಿಯಲ್ಲಿ
ತೀರ್ಥಹಳ್ಳಿಗೆ ಭೇಟಿನೀಡಿ ಭಾಷಣ ಮಾಡಿದ್ದು ಸಾರ್ವಜನಿಕರಿಂದ ದೇಣಿಗೆ ಸ್ವೀಕರಿಸಿದ್ದು ಸ್ಮರಣೀಯ.
ಶತಮಾನ ಕಳೆದರು ಅವರು ಪ್ರಸ್ತುತವಾಗುತ್ತಲೇ ಸಾಗುತ್ತಿದ್ದಾರೆ ಎಂದು ತಾಲ್ಲೂಕು ಕಾರ್ಯನಿರತ ಪತ್ರಕರ್ತರ
ಸಂಘದ ಅಧ್ಯಕ್ಷ ಮುನ್ನೂರು ಮೋಹನ್ ಹೇಳಿದರು.
ಕುರುವಳ್ಳಿಯ
ಯುವ ಸಂಘದ ಆವರಣದಲ್ಲಿ ಏರ್ಪಡಿಸಲಾಗಿದ್ದ 80ನೇ ವರ್ಷದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಅವರು
ಮಾತನಾಡಿದರು.
ಪಟ್ಟಣ ಪಂಚಾಯಿತಿ ಸದಸ್ಯೆ ಮಂಜುಳಾ ನಾಗೇಂದ್ರ ಮಾತನಾಡಿ, ಸ್ವಾತಂತ್ರ್ಯವನ್ನು ಅದರ ಆಶಯಕ್ಕೆ ಪೂರಕವಾಗಿ ದೇಶದ ಅಭಿವೃದ್ಧಿಗೆ ಬಳಸಿದಾಗ ಸಾರ್ಥಕತೆ ಮೂಡುತ್ತದೆ. ಭಾರತ ಇಂದು ಅಭಿವೃದ್ಧಿ ಪಥದಲ್ಲಿ ಸಾಗಲು ಹಿರಿಯರ ತ್ಯಾಗ ಬಲಿದಾನವೇ ಕಾರಣವಾಗಿದೆ ಎಂದರು.
ಕಾರ್ಯಕ್ರಮದ
ಅಧ್ಯಕ್ಷತೆ ವಹಿಸಿ ಮಾತನಾಡಿ ಯುವಕ ಸಂಘದ ಅಧ್ಯಕ್ಷ ಹೆಚ್.ಪಿ.ಅನಿಲ್, ಕುರುವಳ್ಳಿ ಯುವಕ ಸಂಘ ಸ್ವಾತಂತ್ರೋತ್ಸವ
ಸೇರಿದಂತೆ ಎಲ್ಲಾ ರಾಷ್ಟ್ರೀಯ ಹಬ್ಬಗಳನ್ನು ನಿಯಮಿತವಾಗಿ ಆಚರಿಸುತ್ತ ಬಂದಿದೆ. ಪ್ರತಿವರ್ಷವೂ ವಿವಿಧ
ಕಾರ್ಯಕ್ರಮಗಳನ್ನು ಆಯೋಜಿಸಿ ಎಳೆಯರು ಮತ್ತು ಯುವಕರಲ್ಲಿ ದೇಶಭಕ್ತಿ ತುಂಬುವ ಕಾರ್ಯದಲ್ಲಿ ನಿರತರಾಗಿದೆ.
ರಾಷ್ಟ್ರೀಯ ಹಬ್ಬಗಳ ಆಚರಣೆ ಎಲ್ಲರ ಮನೆಯ ಹಬ್ಬದಂತೆ ಆಚರಿಸುವಂತಾಗಬೇಕೆಂದು ಆಶಿಸಿದರು.
ಕಾರ್ಯಕ್ರಮವನ್ನು
ಭಾರತ ಸೇನೆಯ ಯೋಧ ಪ್ರಿಯದರ್ಶನ್ ಉದ್ಘಾಟಿಸಿದರು. ವೇದಿಕೆಯಲ್ಲಿ ಗೌರವಾಧ್ಯಕ್ಷ ಬಿ.ಎನ್.ಗುರುರಾಜ್,
ಪ್ರಗತಿ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕಿ ಸುರೇಖ ಇನ್ನಿತರರು ಉಪಸ್ಥಿತರಿದ್ದರು. ರಮ್ಯ ಅನಿಲ್
ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಕುರುವಳ್ಳಿ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.
ಕುರುವಳ್ಳಿ ಸರ್ಕಾರಿ ಶಾಲೆಯ ಮಕ್ಕಳು ರಾಷ್ಟ್ರಗೀತೆಗಳನ್ನು ಹಾಡಿದರು.

