ತೀರ್ಥಹಳ್ಳಿ ತಾಲ್ಲೂಕಿಗೆ
ಮಹತ್ವದ ಕೊಡುಗೆ
ಡಾ.ಯು.ಆರ್.ಅನಂತಮೂರ್ತಿ,
ಶಾಂತವೇರಿ ಗೋಪಾಲಗೌಡರಿಗೆ ವಿಶೇಷ ಮನ್ನಣೆ
ಸಫಲವಾದ ಮಾಜಿ ಸಚಿವ
ಕಿಮ್ಮನೆ ಪ್ರಯತ್ನ
ದಾಖಲೆಯ 17ನೇ ಬಾರಿಯ
ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಥಹಳ್ಳಿ ಕ್ಷೇತ್ರಕ್ಕೆ ಸಿಹಿಸುದ್ದಿ ನೀಡಿದ್ದಾರೆ.
ವಿಶ್ವದ ಪ್ರಸಿದ್ಧ
ಸಾಹಿತಿಗಳಲ್ಲಿ ಒಬ್ಬರು ಮತ್ತು ದೇಶದಲ್ಲಿಯೇ ಎರಡು ಜ್ಞಾನಪೀಠ ಪಡೆದ ಏಕಮಾತ್ರ ತಾಲ್ಲೂಕು ಎಂಬ ಹೆಗ್ಗಳಿಕೆ
ತೀರ್ಥಹಳ್ಳಿಗೆ ಬರಲು ಕಾರಣರಾದ ಡಾ.ಯು.ಆರ್.ಅನಂತಮೂರ್ತಿ ಹೆಸರಿನಲ್ಲಿ ಅಧ್ಯಯನ ಕೇಂದ್ರ ಅರಂಭಿಸುವುದಾಗಿ
ಬಜೆಟ್ನಲ್ಲಿ ಘೋಷಣೆ ಮಾಡಿದ್ದಾರೆ. ಕನ್ನಡ ಸಾಹಿತ್ಯ ಜಗತ್ತಿಗೆ ಹೊಸ ತಿರುವುದು ನೀಡಿದ ಪ್ರಮುಖರಲ್ಲಿ
ಒಬ್ಬರಾಗಿರುವ ಡಾ.ಯು.ಆರ್.ಅನಂತಮೂರ್ತಿ ಮೂಲತಃ ತೀರ್ಥಹಳ್ಳಿಯ ಮೇಳಿಗೆಯವರು. ಹಾಗೂ ಮೇರು ಸಮಾಜವಾದಿ
ಶಾಂತವೇರಿ ಗೋಪಾಲಗೌಡರ ನೆಚ್ಚಿನ ಒಡನಾಡಿಯೂ ಆಗಿದ್ದವರು. ತೀರ್ಥಹಳ್ಳಿಯಲ್ಲಿ ಅವರ ಹೆಸರಿನಲ್ಲಿ ಅಧ್ಯಯನ
ಕೇಂದ್ರ ಆಗಬೇಕು ಎಂದು ಹಲವು ವರ್ಷಗಳಿಂದ ಪ್ರಯತ್ನಿಸಲಾಗಿತ್ತು. ಕಿಮ್ಮನೆ ರತ್ನಾಕರ್ ಅವರು ಶಿಕ್ಷಣ
ಸಚಿವರಾಗಿದ್ದಾಗ ಡಾ.ಯು.ಆರ್.ಅನಂತಮೂರ್ತಿ ಹೆಸರನ್ನು ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಇಡುವ
ಮೂಲಕ ಗೌರವ ಸೂಚಿಸಲಾಗಿತ್ತು. ಬಳಿಕವೂ ಅವರ ಹೆಸರಿನಲ್ಲಿ ಅಧ್ಯಯನ ಕೇಂದ್ರ ಸ್ಥಾಪಿಸಲು ಮುಖ್ಯಮಂತ್ರಿ
ಸಿದ್ದರಾಮಯ್ಯ ಅವರ ಮನವೊಲಿಸಲು ಕಿಮ್ಮನೆ ರತ್ನಾಕರ್ ಪ್ರಮುಖ ಪಾತ್ರ ವಹಿಸಿದ್ದರು. ಅವರ ಒತ್ತಾಸೆಗೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸುವ ಮೂಲಕ ಸಾಹಿತ್ಯ ಪ್ರೇಮಿಗಳ ಬಹುಕಾಲದ ಆಶಯವೊಂದು ಈಡೇರಿದೆ.
ಮೇರು ಸಮಾಜವಾದಿ
ಶಾಂತವೇರಿ ಗೋಪಾಲಗೌಡರ ಹೆಸರನ್ನು ಬೆಂಗಳೂರಿನ ಪ್ರಸಿದ್ಧ ವಿಕ್ಟೋರಿಯಾ ಆಸ್ಪತ್ರೆಗೆ ಮರು ನಾಮಕರಣ
ಮಾಡಲಾಗಿದೆ. ಆ ಮೂಲಕ ಈ ಅಮರ ಸಮಾಜವಾದಿಗೆ ಸಿದ್ಧರಾಮಯ್ಯ ಮತ್ತೊಮ್ಮೆ ಗೌರವ ಸಲ್ಲಿಸಿದ್ದಾರೆ. ವಾಸ್ತವವಾಗಿ
1900ನೇ ಇಸವಿಯಲ್ಲಿ ಮೈಸೂರು ಸಂಸ್ಥಾನದ ರಾಜಮಾತೆ ಕೆಂಪನಂಜಮ್ಮಣ್ಣಿ ಮುತುವರ್ಜಿ ವಹಿಸಿ ಈ ಆಸ್ಪತ್ರೆಯನ್ನು
ಸ್ಥಾಪಿಸಿದ್ದರು. ಬ್ರಿಟೀಷ್ ಆಡಳಿತದ ಕಾರಣದಿಂದಾಗಿ ಇಂಗ್ಲೆಂಡ್ನ ಮಹಾರಾಣಿ ವಿಕ್ಟೋರಿಯಾ ಹೆಸರು
ಇಡಲಾಗಿತ್ತು. ಅಲ್ಲದೇ ಶಾಂತವೇರಿ ಗೋಪಾಲಗೌಡರು ತಮ್ಮ ಕೊನೆಯ ದಿನಗಳನ್ನು ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ
ಪಡೆದಿದ್ದರು. ಮತ್ತು ಅಲ್ಲಿಯೇ ಕೊನೆಉಸಿರೆಳೆದಿದ್ದರು.
