ಅರಮನೆ ಬ್ಯಾಣ ವಿವಾದ‌ ; ನಾನೆಂದೂ ಗ್ರಾಮಸ್ಥರ ಪರ

ಮುಲಾಜಿಲ್ಲದ ಅಭಿಪ್ರಾಯದೊಂದಿಗೆ ಗಮನ ಸೆಳೆದ ಚಂದುವಳ್ಳಿ ಸೋಮಶೇಖರ್
ದುಡ್ಡಿದ್ದರೆ ಏನೂ ಬೇಕಾದರೂ ಮಾಡಬಹುದೇ - ಚಂದವಳ್ಳಿ ಸೋಮಶೇಖರ್

ಧರ್ಮೇಶ್ ನಾನು ಆತ್ಮೀಯರೇ, ಆದರೆ ಅರಮನೆ ಬ್ಯಾಣದ ವಿಚಾರದಲ್ಲಿ ಆಗಿರುವ ಅಕ್ರಮ ಮತ್ತು ಪರಿಸರ ನಾಶವನ್ನು ನಾನು ತೀವ್ರವಾಗಿ ವಿರೋದಿಸುತ್ತೇನೆ. ಈಗಾಗಲೇ ನನಗೆ ಈ ವಿಚಾರದಲ್ಲಿ ಗ್ರಾಮಸ್ಥರ ಪರ ನಿಂತ ಕಾರಣ ಚುನಾವಣೆ ಹೇಗೆ ಎದುರಿಸುತ್ತೀಯ ಎಂಬ ಬೆದರಿಕೆಗಳು ಬಂದಾಗಿದೆ. ಆದರೆ ಇಲ್ಲಿನ ಪರಿಸರದ ಮೇಲಾದ ದಬ್ಬಾಳಿಕೆಯನ್ನು ಸಹಿಸಿಕೊಂಡರೆ ನಾವೆಲ್ಲ ಜನಪ್ರತಿನಿಧಿಗಳಾಗಲು ಲಾಯಕ್ಕಲ್ಲ ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ ಎನ್ನುವ ಮೂಲಕ ಮಾಜಿ ತಾ.ಪಂ. ಸದಸ್ಯ ಚಂದುವಳ್ಳಿ ಸೋಮಶೇಖರ್‌ ಅರಮನೆ ಬ್ಯಾಣ ಹೋರಾಟ ಸಮಿತಿಗೆ ಸ್ಪಷ್ಟ ಬೆಂಬಲ ನೀಡಿದ್ದಾರೆ.

ಆಕ್ರೋಶದಿಂದ ಮಾತನಾಡಿದ ಸೋಮಶೇಖರ್‌, ನೂರಾರು ಸಂಖ್ಯೆಯ ಜಾನುವಾರುಗಳು, ಅಸಂಖ್ಯಾತ ಪ್ರಾಣಿ, ಪಕ್ಷಿಗಳಿಗೆ ಆಶ್ರಯ ಒದಗಿಸಿದ್ದ ದಟ್ಟವಾದ ಮರ ಗಿಡಗಳಿಂದ ಕೂಡಿದ್ದ ಬ್ಯಾಣವನ್ನು ಸರ್ವನಾಶ ಮಾಡಿದ್ದು ಸಹಿಸಲು ಸಾಧ್ಯವಿಲ್ಲ. ಯಾವ ಬೆಲೆ ತೆತ್ತಾದರೂ ನಾನು ಜನರ ಪರ ನಿಲ್ಲುವೆ. ಅಧಿಕಾರ ಮತ್ತು ದುಡ್ಡಿನ ಬಲದಿಂದ ಇಲ್ಲಿ ದಬ್ಬಾಳಿಕೆ ನಡೆದಿದೆ. ಇಡೀ ಗ್ರಾಮದ ವಿರೋಧ ಲೆಕ್ಕಿಸದೆ ಅಕ್ರಮವಾಗಿ ಈ ಭೂಮಿ ಧರ್ಮೇಶ್ ಕುಟುಂಬಕ್ಕೆ ಪರಬಾರೆ ಮಾಡಲಾಗಿದೆ. ಇಲ್ಲಿಯ ಜನ ಈ ಬ್ಯಾಣವನ್ನು ಎಂದೂ ಕೂಡ ಒತ್ತುವರಿ ಮಾಡಿರಲಿಲ್ಲ. ಕೇವಲ ಜಾನುವಾರು ಮೇಯಿಸೋಕೆ ಬಳಸುತ್ತಿದ್ದರು. ಈಗ ಎಲ್ಲವನ್ನು ನಾಶ ಮಾಡಿ ಬೇಲಿ ಸುತ್ತಲಾಗಿದೆ. ಅಕ್ರಮಕ್ಕೆ ಸಹಕರಿಸದಿದ್ದರೆ ಕೆಳಗಿನ ರೈತರ ಸಾಗುವಳಿ ಭೂಮಿ ಕೂಡ ತಮ್ಮ ಖಾತೆ ಯೊಳಗೆ ಬರುತ್ತದೆ ಅದನ್ನು ಕೂಡ ವಶಪಡಿಸಿಕೊಳ್ಳಲು ಗೊತ್ತು ಎಂದು ಬೆದರಿಸಲಾಗಿದೆ. ಬೆದರಿಕೆಗಳಿಗೆ ಅಂಜುವುದಿಲ್ಲ ಎಂದು ಸೋಮಶೇಖರ್ ಹೇಳಿದ್ದಾರೆ.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post