ಜೆಡಿಎಸ್ ಮುಖಂಡ ತಲಬಿ ರಾಘವೇಂದ್ರಗೆ ಪಿತೃ ವಿಯೋಗ
ಹುಣಸವಳ್ಳಿ ಗ್ರಾಮದ ತಲಬಿ ಗ್ರಾಮದ ಕೃಷಿಕ ಜನ್ನೇ ಗೌಡ (85) ಗುರುವಾರ ಸಂಜೆ ನಿಧನರಾದರು. ಮೂಲತಃ ಉತ್ತಮ ಜಾನಪದ ಕಲಾವಿದರು ಆಗಿದ್ದ ಜನ್ನೇ ಗೌಡ ಗ್ರಾಮದಲ್ಲಿ ತಮ್ಮ ಲವಲವಿಕೆ ಹಾಗೂ ಜನಾನುರಾಗಿ ವ್ಯಕ್ತಿತ್ವದಿಂದ ಆಪ್ತರಾಗಿದ್ದರು.
ಅವರು ಪತ್ನಿ ಹಾಗೂ ಜೆಡಿಎಸ್ ಯುವ ಘಟಕ ಅಧ್ಯಕ್ಷ ತಲಬಿ ರಾಘವೇಂದ್ರ ಸೇರಿದಂತೆ ಇಬ್ಬರು ಪುತ್ರ ಸೇರಿದಂತೆ ಕುಟುಂಬ ವರ್ಗದವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಶುಕ್ರವಾರ ಬೆಳಿಗ್ಗೆ 9.30 ಕ್ಕೆ ತಲಬಿಯಲ್ಲಿ ನಡೆಯಲಿದೆ.