ಕುವೆಂಪು ಮರೆತ ತಾಲೂಕು ಆಡಳಿತ ಮತ್ತು ಪಟ್ಟಣ ಪಂಚಾಯತ್
ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆಯನ್ನೇ ತಾಲ್ಲೂಕು ಆಡಳಿತ ಮರೆತು ಬಿಟ್ಟಿದೆ. ಕಡೆ ಪಕ್ಷ ಕುವೆಂಪು ವೃತ್ತದಲ್ಲಿನ ಅವರ ಪ್ರತಿಮೆ ಸ್ವಚ್ಛಗೊಳಿಸುವುದಾಗಲಿ ಅದಕ್ಕೊಂದು ಹಾರ ಹಾಕುವುದಾಗಲಿ ಮಾಡಲಿಲ್ಲ. ದಾರ್ಶನಿಕರ ದಿನಾಚರಣೆಗಳು ತಾಂತ್ರಿಕವಾಗಿ ಆಚರಿಸುವ ವ್ಯವಸ್ಥೆ ಜಾರಿಯಲ್ಲಿ ಇರುವುದರಿಂದ ಪದೇ ಪದೇ ವ್ಯಕ್ತಿತ್ವದ ಅನಾವರಣವನ್ನು ಮಾಡುವಲ್ಲಿ ಆಡಳಿತ ವಿಫಲವಾಗುತ್ತಿದೆ.
ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತ್ ಸದಸ್ಯ ಅಣ್ಣಪ್ಪ, ಬಿಜೆಪಿ ಯುವ ಮುಖಂಡ ರಕ್ಷಿತ್ ಮೇಗರವಳ್ಳಿ, ಅನೂಪ್, ಕೊಂಡ್ಲೂರು ಅಭಿ, ವಿನುತ್, ಸೇರಿದಂತೆ ಉತ್ಸಾಹಿ ಹುಡುಗರು ಸೇರಿಕೊಂಡು ಪ್ರತಿಮೆ ಸ್ವಚ್ಛಗೊಳಿಸಿ ಹಾರ ಹಾಕಿ ಕುವೆಂಪು ಜನ್ಮದಿನ ಆಚರಿಸಿದರು.