ರಾಮಚಂದ್ರ ಕೊಪ್ಪಲುಗೆ ಮಾತೃ ವಿಯೋಗ
ತೀರ್ಥಹಳ್ಳಿ ತಾಲ್ಲೂಕಿನ ಕೊಪ್ಪಲು ನಿವಾಸಿ ಭಾರತಿ ಸುಬ್ರಾಯ ಭಟ್ ಭಾನುವಾರ ಮಧ್ಯಾಹ್ನ ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಪತ್ರಕರ್ತ, ವ್ಯಂಗ್ಯಚಿತ್ರಕಾರ ರಾಮಚಂದ್ರ ಕೊಪ್ಪಲು ಸೇರಿದಂತೆ ಎರಡು ಗಂಡು, ಎರಡು ಹೆಣ್ಣು ಮಕ್ಕಳು ಇದ್ದಾರೆ. ಸುಬ್ರಾಯ ಭಟ್ ಹೆಸರಾಂತ ಸಮಾಜವಾದಿ ಶಂಕರನಾರಾಯಣ ಭಟ್ ಅವರ ಸಹೋದರರಾಗಿದ್ದಾರೆ. ಸಮಾಜವಾದಿ ಹೋರಾಟದ ಸಂದರ್ಭ ಕುಟುಂಬ ಬಹುಪಾಲು ಭೂಮಿಯನ್ನು ಗೇಣಿದಾರರಿಗೆ ಹಂಚುವ ಮೂಲಕ ಆರಂಭಿಕ ದಿನಗಳಲ್ಲೇ ಜನಮನ್ನಣೆ ಪಡೆದಿದ್ದರು. ಮೃತರ ಅಂತ್ಯಕ್ರಿಯೆ ಸೋಮವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ತಿಳಿದು ಬಂದಿದೆ.