ಕಾನೂನು ಬಾಹಿರ ಚಟುವಟಿಕೆ ಮಾಹಿತಿ ಹಂಚಿಕೊಳ್ಳಿ

ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲು ಕೈಜೋಡಿಸಿ

ನಿಮ್ಮ ಸುತ್ತಮುತ್ತಲು ಅನೇಕ ಕಾನೂನು ಬಾಹಿರ ಘಟನೆಗಳು ವರದಿಯಾಗುತ್ತದೆ. ಅವುಗಳ ಮಾಹಿತಿಯನ್ನು ತಕ್ಷಣವೇ ಬೀಟ್‌ ಪೊಲೀಸ್‌ ಸಿಬ್ಬಂದಿಗಳಿಗೆ ನೀಡಿದರೆ ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ. ನೆರಹೊರೆಯ ಭಾಗದಲ್ಲಿ ಯಾರು ಏಕೆ ಓಡಾಡುತ್ತಾರೆ ಎಂಬ ಬಗ್ಗೆಯೂ ಎಚ್ಚರ ವಹಿಸಬೇಕು ಎಂದು ತೀರ್ಥಹಳ್ಳಿ ವೃತ್ತ ನಿರೀಕ್ಷಕ, ಮಾಳೂರು ಪ್ರಭಾರ ವೃತ್ತ ನಿರೀಕ್ಷಕ ಇಮ್ರಾನ್‌ ಬೇಗ್‌ ಆಗುಂಬೆಯಲ್ಲಿ ಶನಿವಾರ ಉಪವಿಭಾಗ, ಮಾಳೂರು ವೃತ್ತ ಹಮ್ಮಿಕೊಂಡಿದ್ದ ಮನೆ ಮನೆಗೆ ಪೊಲೀಸ್‌-2025 ಕಾರ್ಯಕ್ರಮದ ಮಾಹಿತಿ ಹಂಚಿಕೊಂಡರು.

ಡ್ರಗ್ಸ್‌ ಸೇವನೆ, ವೇಗವಾಗಿ ವಾಹನ ಚಲಾಯಿಸುವುದು, ವಾಹನಗಳಲ್ಲಿ ಸರ್ಕಸ್‌ ಮಾಡುವುದು, ಮಕ್ಕಳಿಗೆ, ಮಹಿಳೆಯರಿಗೆ ತೊಂದರೆ ನೀಡುತ್ತಿದ್ದರೆ ನೇರವಾಗಿ ಪೊಲೀಸ್‌ ಇಲಾಖೆಗೆ ಮಾಹಿತಿ ತಿಳಿಸಿ. ನಿಮ್ಮ ಮನೆಯ ಸುತ್ತಮುತ್ತಲ ಮಾಹಿತಿ ಲಭಿಸಿದರೆ ಜನಸ್ನೇಹಿಯಾದ ಪೊಲೀಸ್‌ ಆಡಳಿತ ನೀಡಬಹುದು. ಹೊರಗಿನವರ ಬಗ್ಗೆ ಎಚ್ಚರಿಕೆ ಇರಬೇಕು ಎಂದರು.

ಸಾರ್ವಜನಿಕರು ಮತ್ತು ಪೊಲೀಸರ ನಡುವಿನ ಸಂಬಂಧ ಹೆಚ್ಚಿಸಲು ಸಹಕಾರಿಯಾಗಿದೆ. ಜನರೊಂದಿಗೆ ಸಮನ್ವಯ ಸಾಧಿಸಿ ಕಾನೂನು ಬಾಹಿರ ಚಟುವಟಿಕೆ ತಡೆಯಲು ಈ ಕಾರ್ಯಕ್ರಮ ಅನುಕೂಲವಾಗಿದೆ. ಕಷ್ಟದ ಸಮಯದಲ್ಲಿ ತುರ್ತು ಕರೆಗಳನ್ನು ಮಾಡಬಹುದು. ನೆರಹೊರೆಯ ಮಾಹಿತಿ ಲಭ್ಯವಾದರೆ ಜನಸ್ನೇಹಿ ಸೇವೆ ನೀಡಲು ಅನುಕೂಲವಾಗುತ್ತದೆ. ನಿರಂತರವಾಗಿ ಗ್ರಾಮಗಳಲ್ಲಿ ಗಸ್ತು ಸಿಬ್ಬಂದಿಗಳು ಸಂಚರಿಸುತ್ತಿರುತ್ತಾರೆ. ಹೊರಗಿನಿಂದ ಕೆಲಸಕ್ಕೆ ಆಗಮಿಸುವವರ ಬಗ್ಗೆಯೂ ಎಚ್ಚರವಿರಲಿ ಎಂದರು.

ಪಿಎಸ್‌ಐ ಶಿವನಗೌಡ, ಎಎಸ್‌ಐ ಪಾರ್ವತಮ್ಮ, ಉಮೇಶ್‌ ನಾಯ್ಕ್‌, ಸಿಬ್ಬಂದಿಗಳಾದ ನಾಗಾರ್ಜುನ್‌, ಅನಿಲ್‌ ಹಿರೇಬೈಲು, ಸ್ಥಳೀಯರಾದ ವೆಂಕಟೇಶ್‌ ಹೆಗಡೆ, ಹಸಿರುಮನೆ ಮಹಾಬಲೇಶ್‌, ನೇತ್ರಾವತಿ ಚಂದ್ರಹಾಸ, ಕೊರೋಡಿ ಕೃಷ್ಣಪ್ಪ, ಅಜಿತ್‌ ಅಣ್ಣುವಳ್ಳಿ ಮುಂತಾದವರು ಇದ್ದರು.




ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post