ಪ್ರಥಮ ರ್ಯಾಂಕ್
ಗರಿಮೆಗೆ ಮತ್ತೊಂದು ಹಿರಿಮೆ
202 ಶಿಕ್ಷಣ ಇಲಾಖೆ
ಪೈಕಿ ಕ್ಷೇತ್ರ ಶಿಕ್ಷಣ ಇಲಾಖೆಗೆ ಪ್ರಥಮ ಸ್ಥಾನ
ಬೈಕ್ನಲ್ಲೇ ಕ್ಷೇತ್ರ ಸುತ್ತಾಡಿದ
ಬಿಇಓ ಗಣೇಶ್
ತೀರ್ಥಹಳ್ಳಿ ತಾಲ್ಲೂಕು
ರಾಜ್ಯದಲ್ಲೇ 2025ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಮತ್ತೊಮ್ಮೆ
ರಾಜ್ಯದ ಗಮನ ಸೆಳೆದಿದೆ. ಪಿಯುಸಿಯಲ್ಲಿಯೂ ದೀಕ್ಷಾ ಆರ್ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ
ಸ್ಥಾನ ಪಡೆದಿದ್ದರು. ಇದೀಗ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿಯೂ ತಾಲ್ಲೂಕು ಪ್ರಥಮ ಸ್ಥಾನ ಪಡೆದಿರುವುದು
ವಿಶೇಷವಾಗಿದೆ.
ರಾಜ್ಯದ 202 ಕ್ಷೇತ್ರ
ಶಿಕ್ಷಣ ಇಲಾಖೆ ಪೈಕಿ ಶೇಕಡಾ 94.16 ಪಡೆಯುವ ಮೂಲಕ ತೀರ್ಥಹಳ್ಳಿ ತಾಲ್ಲೂಕು ಪ್ರಥಮ ಸ್ಥಾನಕ್ಕೆ ಏರಿದೆ.
ಗುರುವಾರ ಸಾಕ್ಷರತಾ ಮತ್ತು ಶಾಲಾ ಶಿಕ್ಷಣ ಇಲಾಖೆ ಅಧಿಕೃತವಾಗಿ ಮಾಹಿತಿಯನ್ನು ಗುರುವಾರ ಪ್ರಕಟಿಸಿದೆ.
ಈ ಕ್ರಮಾಂಕಕ್ಕೆ ಎಸ್ಎಸ್ಎಲ್ಸಿಯ ಮೊದಲ ಪರೀಕ್ಷೆಯ ಫಲಿತಾಂಶವನ್ನು ಪರಿಗಣಿಸಲಾಗಿದೆ. ತೀರ್ಥಹಳ್ಳಿಯಲ್ಲಿ
ಒಟ್ಟು 1456 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ 1371 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಉತ್ತೀರ್ಣರಾದವರಲ್ಲಿ 693 ಬಾಲಕರು, 678 ಬಾಲಕೀಯರು ಇದ್ದಾರೆ. ನಂತರದ ಸ್ಥಾನದಲ್ಲಿ ಸಿದ್ದಾಪುರ,
ಪುತ್ತೂರು, ಬೆಳ್ತಂಗಡಿ, ಸಕಲೇಶಪುರ ಪಡೆದುಕೊಂಡಿದೆ.
ಬೈಕ್ನಲ್ಲೇ ಕ್ಷೇತ್ರ ಸುತ್ತಾಡಿದ ಬಿಇಓ ಗಣೇಶ್
ತೀರ್ಥಹಳ್ಳಿ ಕ್ಷೇತ್ರ
ಶಿಕ್ಷಣ ಇಲಾಖೆಗೆ ತನ್ನದೇ ಆದ ವಾಹನದ ಸೌಲಭ್ಯ ಇರಲಿಲ್ಲ. ಮಲೆನಾಡು ಪ್ರದೇಶವಾಗಿದ್ದರು ನೂರಾರು ಕಿಲೋ
ಮೀಟರ್ ಕ್ರಮಿಸುವುದು ಕಷ್ಟ ಸಾಧ್ಯ. ಮಳೆಗಾಲದ ಸಂದರ್ಭದಲ್ಲಿಯೂ ಶಾಲೆಗಳ ಪರಿಸ್ಥಿತಿ ಅವಲೋಕ ಮಾಡುವುದನ್ನು
ಬಿಇಓ ವೈ.ಗಣೇಶ್ ಬಿಟ್ಟಿರಲಿಲ್ಲ. ಬಹುತೇಕ ಸಂದರ್ಭದಲ್ಲಿ ಬೈಕ್ನಲ್ಲಿಯೇ ಓಡಾಡಿ ಶೈಕ್ಷಣಿಕ ಪ್ರಗತಿಗೆ
ವೇಗ ನೀಡಿದ್ದರು. ಇದೀಗ ತೀರ್ಥಹಳ್ಳಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದು ಕ್ಷೇತ್ರ ಶಿಕ್ಷಣಾಧಿಕಾರಿಗಳ
ಕಾರ್ಯ ಶ್ಲಾಘನೀಯ.
