ಯುವ ಮುಖಂಡ ಪೂರ್ಣೇಶ್ ಪೂಜಾರಿಗೆ ಮಾತೃ ವಿಯೋಗ
ತೀರ್ಥಹಳ್ಳಿ ತಾಲ್ಲೂಕಿನ ಮೇಲಿನ ಕುರುವಳ್ಳಿ ನಿವಾಸಿ ಯಶೋಧ ಗೋಪಾಲ ಪೂಜಾರಿ (67) ಬುಧವಾರ ಮುಂಜಾನೆ ಹೃದಯಾಘಾತದಿಂದ ನಿಧನರಾದರು. ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ಸದಸ್ಯ, ಮಾಜಿ ಉಪಾಧ್ಯಕ್ಷ, ಸಾಮಾಜಿಕ ಸೇವಕ ಗೋಪಾಲ ಪೂಜಾರಿ ಅವರ ಧರ್ಮಪತ್ನಿ.
ಅವರು ಪುತ್ರ, ಬಿಜೆಪಿ ಯುವ ಮುಖಂಡ ಪೂರ್ಣೇಶ್ ಪೂಜಾರಿ, ಓರ್ವ ಪುತ್ರಿ, ಮೊಮ್ಮಕ್ಕಳು, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಅಂತ್ಯಕ್ರಿಯೆ ತೀರ್ಥಹಳ್ಳಿಯಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.
