ರಾಜ್ಯಪಾಲರಿಂದ ಹಗರಣ ತನಿಖೆಗೆ ಅವಕಾಶ
ಸಿದ್ದರಾಮಯ್ಯಗೆ
ಬಿಗ್ ಶಾಕ್ ; ಅಲುಗಾಡುತ್ತಿದೆ ಸಿಎಂ ಕುರ್ಚಿ
ರಾಜ್ಯದ ಕಾಂಗ್ರೆಸ್ ಸರ್ಕಾರ ಅಸ್ಥಿರ
ಮೂಡ ಅಕ್ರಮದ ಆರೋಪ
ಎದುರಿಸುತ್ತಿರುವ ಸಿಎಂ ಸಿದ್ಧರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲ ಥಾವರಚಂದ್ರ ಗೆಹಲೋತ್
ಅನುಮತಿ ನೀಡಿದ್ದಾರೆ. ಈ ಬೆಳವಣಿಗೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷಿಸಿದ್ದು ಕರ್ನಾಟಕ ರಾಜ್ಯದ
ಸಿಎಂ ಕುರ್ಚಿ ಅಲುಗಾಟ ಆರಂಭಗೊಂಡಿದೆ.
ಮೈಸೂರಿನಲ್ಲಿ ಜಮೀನು
ಒತ್ತುವರಿ ಮಾಡಿಕೊಂಡು ಪತ್ನಿಯ ಹೆಸರಿಗೆ ಮೂಡದಿಂದ 14 ನಿವೇಶನ ಪಡೆದಿರುವ ಹಿನ್ನಲೆಯಲ್ಲಿ ಇದೀಗ ಸಿಎಂ
ಸಿದ್ದರಾಮಯ್ಯಗೆ ಕಾನೂನಿನ ಸಂಕಷ್ಟ ಎದುರಾಗಿದೆ. ಕಾನೂನಾತ್ಮಕವಾಗಿ ಸಿದ್ದರಾಮಯ್ಯ ತನಿಖೆಗೆ ಒಳಪಡಲಿದ್ದು
ಯಾವ ಸಂದರ್ಭದಲ್ಲಿ ಕೂಡ ತನಿಖೆಗೆ ಒಳಪಡುವ ಸಾಧ್ಯತೆ ಇದೆ. ಮತ್ತೊಂದೆಡೆ ರಾಜಕೀಯವಾಗಿಯೂ ವಿರೋಧ ಪಕ್ಷಗಳಿಗೆ
ದೊಡ್ಡ ಅಸ್ತ್ರ ಸಿಕ್ಕಿದಂತಾಗಿದೆ.
ರಾಜಭವನದಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ಸಂಬಂಧ ನೋಟೀಸ್ ನೀಡಲಾಗಿದ್ದು ಇದ್ದನ್ನು ಪ್ರಶ್ನಿಸಿ ಮುಖ್ಯಮಂತ್ರಿಗಳ ಲೀಗಲ್ ಟೀಂ ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆ ನಿಶ್ಚಲವಾಗಿದೆ.