2.75 ಕೋಟಿ ನಿವ್ವಳ
ಲಾಭ
ಸೆಪ್ಟೆಂಬರ್
17ಕ್ಕೆ ವಾರ್ಷಿಕ ಮಹಾಸಭೆ - ಬಸವಾನಿ ವಿಜಯದೇವ್
ತೀರ್ಥಹಳ್ಳಿ ತಾಲ್ಲೂಕಿನ
ಸಹ್ಯಾದ್ರಿ ವಿವಿದೋದ್ದೇಶ ಅಡಿಕೆ ಬೆಳೆಗಾರರ ಮಾರಾಟ ಸಹಕಾರ ಸಂಘವು ವಾರ್ಷಿಕ 1,337 ಕೋಟಿ ವಹಿವಾಟು ನಡೆಸಿದೆ. 10 ಕೋಟಿಗೂ
ಹೆಚ್ಚು ಲಾಭ ಗಳಿಸಿದ್ದು 2.75
ಕೋಟಿ ನಿವ್ವಳ ಲಾಭ ಪಡೆದಿದೆ ಎಂದು
ಸಂಘದ ಅಧ್ಯಕ್ಷ ಬಸವಾನಿ ವಿಜಯದೇವ್ ಹೇಳಿದರು.
ರಾಜ್ಯದ 29 ಜಿಲ್ಲೆಗಳಲ್ಲಿ
ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಪ್ರಸ್ತುತ 10 ಸಾವಿರಕ್ಕೂ ಅಧಿಕ ಷೇರುದಾರರನ್ನು ಹೊಂದಿದೆ. ಆಡಿಟ್
ವರ್ಗೀಕರಣದಲ್ಲಿ ಎ ಗ್ರೇಡ್ ಪಡೆದಿದೆ. 85
ಕೋಟಿ ಠೇವಣಿ ಸಂಗ್ರಹಿಸಿದ್ದು 135 ಕೋಟಿ ಸಾಲ ವಿತರಣೆ ಮಾಡಲಾಗಿದೆ ಎಂದು ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ
ನೀಡಿದರು.
ಸಹ್ಯಾದ್ರಿ ಚಿಟ್
ಫಂಡ್ 103 ಗುಂಪುಗಳನ್ನು ಹೊಂದಿದೆ. ಸಹ್ಯಾದ್ರಿ ಮಿನರಲ್ ವಾಟರ್, ಸಾರ್ವಜನಿಕ ಸಾರಿಗೆ, ಪೆಟ್ರೋಲ್
ಬಂಕ್ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಜೊತೆಗೆ ಎಮಿಷನ್ ಟೆಸ್ಟ್ ಘಟಕ, ನಂದಿನ ಉತ್ಪನ್ನ ಮಾರಾಟ ಮಳಿಗೆ ತೆರೆದು ಗ್ರಾಹಕರಿಗೆ 24 ಗಂಟೆಗಳ
ಸೇವೆ ನೀಡುತ್ತಿದ್ದೇವೆ. ಒಟ್ಟು ಸಂಸ್ಥೆಯಲ್ಲಿ 200ಕ್ಕೂ ಹೆಚ್ಚು ಯುವಕ, ಯುವತಿಯರಿಗೆ ಉದ್ಯೋಗವಕಾಶ
ನೀಡಲಾಗಿದೆ ಎಂದರು.
ವಾರ್ಷಿಕ ಮಹಾಸಭೆ
ಸೆಪ್ಟೆಂಬರ್ 17 ರಂದು ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಡಿಸಿಸಿ ಬ್ಯಾಂಕ್
ಅಧ್ಯಕ್ಷ, ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕ, ಶಿಮುಲ್ ಹಾಲು ಒಕ್ಕೂಟದ ನಿರ್ದೇಶಕ, ಎಂಎಡಿಬಿ
ಅಧ್ಯಕ್ಷರಾಗಿ ಆಯ್ಕೆಯಾಗಿರುವ ಆರ್.ಎಂ.ಮಂಜುನಾಥ ಗೌಡ ಅವರನ್ನು ಅಭಿನಂದಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ
ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ
ನಿರ್ದೇಶಕ ಅರುಣ್ ಕುಮಾರ್, ನಗದು ವಹಿವಾಟು ಮುಖ್ಯಸ್ಥೆ ಕಾವ್ಯ ಇದ್ದರು.