ಯುವ ಉದ್ಯಮಿ ಅಮರನಾಥ
ಶೆಟ್ಟಿ ಸಾಹಸಕ್ಕೆ ಗಣ್ಯರ ಹಾರೈಕೆ
ಶುಭಾಷಯ ಕೋರಿದ ಬಂಟರ
ಸಂಘದ ಬಿ.ಆರ್.ರಾಘವೇಂದ್ರ ಶೆಟ್ಟಿ, ಪ್ರಭಾಕರ ಹೆಗ್ಡೆ, ಅಡ್ಡಮನೆ ಪ್ರಭಾಕರ ಶೆಟ್ಟಿ
ತೀರ್ಥಹಳ್ಳಿಯ ಯುವ ಉದ್ಯಮಿ ಅಮರನಾಥ ಶೆಟ್ಟಿ ಅವರ ನೂತನ ʼಕರಾವಳಿʼ ಊಟದ ಮನೆ ಹೋಟೆಲ್ ಆಗಸ್ಟ್ 16ಕ್ಕೆ ಶುಭಾರಂಭಗೊಳ್ಳುತ್ತಿದೆ. ಅವರ ನೂತನ ಹೋಟೆಲ್ ಉದ್ಯಮ ಯಶಸ್ವಿಯಾಗಲಿ ಎಂದು ತೀರ್ಥಹಳ್ಳಿಯ ಬಂಟರ ಸಂಘದ ಗೌರವಾಧ್ಯಕ್ಷ ಅಡ್ಡಮನೆ ಪ್ರಭಾಕರ ಶೆಟ್ಟಿ, ಅಧ್ಯಕ್ಷರು ಪ್ರಭಾಕರ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಮತ್ತು ತುಳುನಾಡು ಸಿರಿ ಸಹಕಾರ ಸಂಘದ ಅಧ್ಯಕ್ಷ ಬಿ.ಆರ್. ರಾಘವೇಂದ್ರ ಶೆಟ್ಟಿ ಶುಭ ಹಾರೈಸಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ವಿಶಿಷ್ಟವಾಗಿ ಕರಾವಳಿ ಶೈಲಿನ ಊಟದ ಸ್ವಾದವನ್ನು ನೀಡುವ ಮೂಲಕ ಮನೆ ಮಾತಾಗಿರುವ ಅಮರನಾಥ ಶೆಟ್ಟಿ ಹೊಸ ಹೆಜ್ಜೆ ಇಟ್ಟಿದ್ದಾರೆ. ತಾಲ್ಲೂಕು ಕೇಂದ್ರದಿಂದ ಜಿಲ್ಲಾ ಕೇಂದ್ರಕ್ಕೆ ತಮ್ಮ ಉದ್ಯಮ ಕ್ಷೇತ್ರವನ್ನು ವಿಸ್ತರಿಸಿದ್ದು ಶ್ಲಾಘನೀಯ ಕಾರ್ಯ. ಅವರ ಉದ್ಯಮ ಇನ್ನಷ್ಟು ಜನರಿಗೆ ಉತ್ತಮವಾದ ಬಗೆಬಗೆಯ ಸಮುದ್ರದ ಮೀನಿನ ಆಹಾರ ಪೂರೈಸಲಿ ಎಂದು ಶುಭ ಕೋರಿದ್ದಾರೆ.
ಎಲ್ಲಿ, ಯಾವಾಗ ?
ಕ್ಲಾಸ್ 1 ಗುತ್ತಿಗೆದಾರಿಕೆ, ರಾಜಕೀಯ, ಹೋಟೆಲ್ ಉದ್ಯಮದಲ್ಲೂ ವಿಶಿಷ್ಟವಾದ ಸಾಧನೆ ಮಾಡಿರುವ ಅಮರನಾಥ ಶೆಟ್ಟಿ ಕಲ್ಪನೆಯ ವಿನೂತನ ಮಾದರಿಯ ಹೋಟೆಲ್ ಇದಾಗಿದೆ. ಶಿವಮೊಗ್ಗದ ಕುವೆಂಪು ರಸ್ತೆಯಲ್ಲಿರುವ ದೇವಿಕೃಪ ಆಸ್ಪತ್ರೆ ಮುಂಭಾಗದಲ್ಲಿ ಆಗಸ್ಟ್ 16ರ ಶುಕ್ರವಾರ ಬೆಳಿಗ್ಗೆ 10.30ಕ್ಕೆ ಶುಭಾರಂಭಗೊಳ್ಳಲಿದೆ.