ಆಗಸ್ಟ್‌ 16ಕ್ಕೆ ʼಕರಾವಳಿʼ ಊಟದ ಮನೆ ಹೋಟೆಲ್‌ ಶುಭಾರಂಭ

ಯುವ ಉದ್ಯಮಿ ಅಮರನಾಥ ಶೆಟ್ಟಿ ಸಾಹಸಕ್ಕೆ ಗಣ್ಯರ ಹಾರೈಕೆ
ಶುಭಾಷಯ ಕೋರಿದ ಬಂಟರ ಸಂಘದ ಬಿ.ಆರ್.ರಾಘವೇಂದ್ರ ಶೆಟ್ಟಿ, ಪ್ರಭಾಕರ ಹೆಗ್ಡೆ, ಅಡ್ಡಮನೆ ಪ್ರಭಾಕರ ಶೆಟ್ಟಿ

ತೀರ್ಥಹಳ್ಳಿಯ ಯುವ ಉದ್ಯಮಿ ಅಮರನಾಥ ಶೆಟ್ಟಿ ಅವರ ನೂತನ ʼಕರಾವಳಿʼ ಊಟದ ಮನೆ ಹೋಟೆಲ್‌ ಆಗಸ್ಟ್‌ 16ಕ್ಕೆ ಶುಭಾರಂಭಗೊಳ್ಳುತ್ತಿದೆ. ಅವರ ನೂತನ ಹೋಟೆಲ್‌ ಉದ್ಯಮ ಯಶಸ್ವಿಯಾಗಲಿ ಎಂದು ತೀರ್ಥಹಳ್ಳಿಯ ಬಂಟರ ಸಂಘದ ಗೌರವಾಧ್ಯಕ್ಷ ಅಡ್ಡಮನೆ ಪ್ರಭಾಕರ ಶೆಟ್ಟಿ, ಅಧ್ಯಕ್ಷರು ಪ್ರಭಾಕರ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಮತ್ತು ತುಳುನಾಡು ಸಿರಿ ಸಹಕಾರ ಸಂಘದ ಅಧ್ಯಕ್ಷ ಬಿ.ಆರ್.‌ ರಾಘವೇಂದ್ರ ಶೆಟ್ಟಿ ಶುಭ ಹಾರೈಸಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ ವಿಶಿಷ್ಟವಾಗಿ ಕರಾವಳಿ ಶೈಲಿನ ಊಟದ ಸ್ವಾದವನ್ನು ನೀಡುವ ಮೂಲಕ ಮನೆ ಮಾತಾಗಿರುವ ಅಮರನಾಥ ಶೆಟ್ಟಿ ಹೊಸ ಹೆಜ್ಜೆ ಇಟ್ಟಿದ್ದಾರೆ. ತಾಲ್ಲೂಕು ಕೇಂದ್ರದಿಂದ ಜಿಲ್ಲಾ ಕೇಂದ್ರಕ್ಕೆ ತಮ್ಮ ಉದ್ಯಮ ಕ್ಷೇತ್ರವನ್ನು ವಿಸ್ತರಿಸಿದ್ದು ಶ್ಲಾಘನೀಯ ಕಾರ್ಯ. ಅವರ ಉದ್ಯಮ ಇನ್ನಷ್ಟು ಜನರಿಗೆ ಉತ್ತಮವಾದ ಬಗೆಬಗೆಯ ಸಮುದ್ರದ ಮೀನಿನ ಆಹಾರ ಪೂರೈಸಲಿ ಎಂದು ಶುಭ ಕೋರಿದ್ದಾರೆ.

ಎಲ್ಲಿ, ಯಾವಾಗ ?

ಕ್ಲಾಸ್‌ 1 ಗುತ್ತಿಗೆದಾರಿಕೆ, ರಾಜಕೀಯ, ಹೋಟೆಲ್‌ ಉದ್ಯಮದಲ್ಲೂ ವಿಶಿಷ್ಟವಾದ ಸಾಧನೆ ಮಾಡಿರುವ ಅಮರನಾಥ ಶೆಟ್ಟಿ ಕಲ್ಪನೆಯ ವಿನೂತನ ಮಾದರಿಯ ಹೋಟೆಲ್‌ ಇದಾಗಿದೆ. ಶಿವಮೊಗ್ಗದ ಕುವೆಂಪು ರಸ್ತೆಯಲ್ಲಿರುವ ದೇವಿಕೃಪ ಆಸ್ಪತ್ರೆ ಮುಂಭಾಗದಲ್ಲಿ ಆಗಸ್ಟ್‌ 16ರ ಶುಕ್ರವಾರ ಬೆಳಿಗ್ಗೆ 10.30ಕ್ಕೆ ಶುಭಾರಂಭಗೊಳ್ಳಲಿದೆ.



ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post