ಸಂಪರ್ಕ
ಕಡಿತಗೊಳ್ಳುವ ಆತಂಕ
ಮನೆಗಳಿಗಿಲ್ಲ
ಸಂಪರ್ಕ ರಸ್ತೆ - ಪಿಡಿಓ ನಾಟ್ ರೀಚಬಲ್
ತೀರ್ಥಹಳ್ಳಿ
ತಾಲ್ಲೂಕಿನ ಮುನ್ನೂರು ಗ್ರಾಮದಲ್ಲಿ ಭಾರಿ ಪ್ರಮಾಣದಲ್ಲಿ ರಸ್ತೆ ಕುಸಿತಗೊಂಡಿದೆ. ಸಂಪರ್ಕ ರಸ್ತೆ
ಸಂಪೂರ್ಣ ಕುಸಿಯುವ ಆತಂಕ ಎದುರಾಗಿದೆ. ಗ್ರಾಮದ ಸಂಪರ್ಕಕ್ಕೆ ಯಾವುದೇ ಪರ್ಯಾಯ ರಸ್ತೆ ಇಲ್ಲದ ಕಾರಣ
ಪೂರ್ತಿ ಕುಸಿತ ಉಂಟಾದಲ್ಲಿ ಗ್ರಾಮವೇ ದ್ವೀಪದಂತಾಗುವ ಬೀತಿ ಎದುರಾಗಿದೆ.
ಗ್ರಾಮದಲ್ಲಿರುವ
ಸುಮಾರು 26ಕ್ಕೂ ಹೆಚ್ಚು ಮನೆಗಳಿದ್ದು ಯಾವುದೇ ಅವಶ್ಯಕ ಸಾಮಾನು ಸರಂಜಾಮು ಸಾಗಿಸುವುದು ಅಸಾಧ್ಯವಾಗಿದ್ದು
ಜೊತೆಗೆ ಶಾಲಾ, ಕಾಲೇಜು ಮಕ್ಕಳಿಗೆ ತೊಂದರೆ ಉಂಟಾಗಲಿದೆ. ಗ್ರಾಮಸ್ಥರು ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ
ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರು ಪಿಡಿಓ ಮತ್ತು ಇತರೆ ಅಧಿಕಾರಿಗಳ ಫೋನ್ ಸ್ವಿಚ್ ಆಫ್ ಆಗಿದೆ.
ತುರ್ತು ಕ್ರಮ ತೆಗೆದುಕೊಳ್ಳದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಗುರಿಯಾಗಿದೆ.