ಮುಖ್ಯಾಧಿಕಾರಿ ಸಿ.ಕುರಿಯಕೋಸ್ ವರ್ಗಾವಣೆ
ಪಟ್ಟಣ ಪಂಚಾಯಿತಿ ನೂತನ ಮುಖ್ಯಧಿಕಾರಿಯಾಗಿ ನಾಗರಾಜ ಡಿ. ಅವರನ್ನು ನೇಮಕಗೊಳಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.ಈ ಹಿಂದೆ ಮೂರುವರೆ ವರ್ಷಗಳ ಕಾಲ ಮುಖ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಸಿ.ಕುರಿಯಕೋಸ್ ವರ್ಗಾವಣೆಯಾಗಿದ್ದಾರೆ. ನಾಗರಾಜ ಡಿ. ಉಳ್ಳಾಲ ನಗರಸಭೆ, ಸೋಮೇಶ್ವರ ಪುರಸಭೆ, ದಕ್ಷಿಣಕನ್ನಡ, ಕಾರ್ಕಳ, ಮೂಡಬಿದ್ರೆ ಪುರಸಭೆಗಳಲ್ಲಿ ಮುಖ್ಯಾಧಿಕಾರಿಯಾಗಿ ವೃತ್ತಿ ನಿರ್ವಹಿಸಿದ್ದಾರೆ.