ರಿನಿವಲ್ ಮತ್ತು ಇ-ಕೆವೈಸಿಗೆ ಅವಕಾಶ
ಸರ್ಕಾರಿ ಸೌಲಭ್ಯದಿಂದ ಕಾರ್ಮಿಕರು ವಂಚಿತರಾಗಬೇಡಿ - ಮಂಜುನಾಥ ಎಸ್, ಪೃಥ್ವಿಶ್ರಮ ಕಾರ್ಮಿಕರ ಸಂಘ ಮೇಲಿನಕುರುವಳ್ಳಿ
ತೀರ್ಥಹಳ್ಳಿಯಲ್ಲಿರುವ
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾರ್ಡ್ (ಲೇಬರ್ ಕಾರ್ಡ್) ರಿನಿವಲ್ ಮತ್ತು ಇ-ಕೆವೈಸಿ
ಮಾಡಿಸುವುದು ಕಡ್ಡಾಯವಾಗಿದೆ. ಕಾರ್ಡ್ ಇ-ಕೆವೈಸಿ ಆಗದಿದ್ದರೆ ಸರ್ಕಾರ ಸೌಲಭ್ಯ, ಪರಿಹಾರ ಸಿಗುವುದಿಲ್ಲ.
ತಕ್ಷಣ ತಡಮಾಡದೆ ಕಾರ್ಮಿಕರು ನೊಂದಾಣಿ ಮಾಡಿಸಿಕೊಳ್ಳಿ ಎಂದು ಪೃಥ್ವಿಶ್ರಮ ಕಲ್ಲುಗಣಿ ಹಾಗೂ ನಿರ್ಮಾಣ
ಶ್ರಮಿಕರ ಸರ್ವೋದಯ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಎಸ್ ಹೇಳಿದ್ದಾರೆ.
ಸರಿಯಾದ ಸಮಯಕ್ಕೆ
ಇ-ಕೆವೈಸಿ ಹಾಗೂ ರಿನಿವಲ್ ಮಾಡಿಸಿಕೊಳ್ಳದಿದ್ದರೆ ವಿದ್ಯಾರ್ಥಿ ವೇತನ, ಮದುವೆ ಸಹಾಯ ಧನ, ವೈದ್ಯಕೀಯ
ವೆಚ್ಚ, ಟೂಲ್ ಕಿಟ್, ಸಹಾಯ ಧನ ಹಾಗೂ ಇನ್ನಿತರೆ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಹಲವು
ಬಾರಿ ನಾವು ತಿಳಿಸಿದ್ದರು ಕೂಡ ಕಾರ್ಮಿಕರು ಮಾಡಿಸಿಕೊಳ್ಳುತ್ತಿಲ್ಲ. ಕಳೆದ 3 ತಿಂಗಳಿನಲ್ಲಿ 5-6
ಕಟ್ಟಡ ಕಾರ್ಮಿಕರು ಮರಣ ಹೊಂದಿದ್ದಾರೆ. ಆದರೆ ರಿನಿವಲ್ ಮಾಡಿಸಿಕೊಂಡಿರದ ಕಾರಣದಿಂದಾಗಿ ಸರ್ಕಾರದಿಂದ
ಮೃತರ ಕುಟುಂಬಕ್ಕೆ ಸಿಗುತ್ತಿದ್ದ 75,000 ಸಹಾಯಧನ ಪಡೆಯಲು ಸಾಧ್ಯವಾಗಿಲ್ಲ. ಕಾರ್ಡ್ ನೊಂದಾಣಿ ಮಾಡುವವರು
ಕೂಡ ಅಸಹಾಯಕರಾಗಬೇಕಾಗುತ್ತದೆ.
ಇ-ಕೆವೈಸಿ ಮಾಡಿಸುವವರು ಮೇಲಿನಕುರುವಳ್ಳಿ ಪೃಥ್ವಿಶ್ರಮ ಕಲ್ಲುಗಣಿ ಹಾಗೂ ನಿರ್ಮಾಣ ಶ್ರಮಿಕರ ಸರ್ವೋದಯ ಸಂಘದ ಕಚೇರಿ ಮೊ.9448688166 ಅಥವಾ ತೀರ್ಥಹಳ್ಳಿ ಒನ್ ಇ-ಸೇವಾ ಕೇಂದ್ರದ ಜೂನಿಯರ್ ಕಾಲೇಜು ರಸ್ತೆಯಲ್ಲಿರುವ ಎಸಿಸಿ ಕಟ್ಟಡದ ಮೊದಲ ಮಹಡಿಯಲ್ಲಿರುವ ಕಚೇರಿಯಲ್ಲಿ ನೊಂದಾಣಿ ಮಾಡಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 9448248990 ಸಂಪರ್ಕಿಸಿ ಎಂದು ತಿಳಿಸಿದ್ದಾರೆ.